ಜನವಾಡ: ರೈತರು ಮಣ್ಣಿನ ಆರೋಗ್ಯ ಕಾಪಾಡುವುದು ಅವಶ್ಯಕವಾಗಿದೆ ಎಂದು ಬೀದರ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್ ಪಾಟೀಲ ಹೇಳಿದರು.
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಹಾರ ಉತ್ಪಾದನೆ ಆಗುವುದೇ ಮಣ್ಣಿನಿಂದ. ಹೀಗಾಗಿ ಮಣ್ಣನ್ನು ಜಾಗರೂಕತೆಯಿಂದ ಬಳಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಬೀದರ್ನ ರಿಲಯನ್ಸ್ ಫೌಂಡೇಷನ್ನ ಮುಖ್ಯಸ್ಥ ರಾಮಚಂದ್ರ ಶೇರಿಕಾರ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ ಮಾತನಾಡಿದರು.
ಕೃಷಿ ಸಂಶೋಧನಾ ಕೇಂದ್ರದ ಬೇಸಾಯ ತಜ್ಞ ಡಾ. ಆರ್.ಎಲ್. ಜಾಧವ್ ನೈಸರ್ಗಿಕ ಕೃಷಿ, ಡಾ. ಅಕ್ಷಯಕುಮಾರ ಸಾವಯವ ಕೃಷಿ ಹಾಗೂ ಧನರಾಜ ಮಣ್ಣಿನ ಪರೀಕ್ಷೆ ಕುರಿತು ಉಪನ್ಯಾಸ ನೀಡಿದರು.
ಪ್ರಮುಖರಾದ ಮಹಾದೇವ, ರಮೇಶಕುಮಾರ ಉಪಸ್ಥಿತರಿದ್ದರು. ರೈತರು ಪಾಲ್ಗೊಂಡಿದ್ದರು.