ಔರಾದ್ ತಾಲ್ಲೂಕಿನ ಹಿಪ್ಪಳಗಾಂವ ಗ್ರಾಮದಲ್ಲಿ ಮಾರುತಿ ಅಶೋಕ ಸಿಂಗೋಡೆ (28) ಹೊಲದಲ್ಲಿ ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಠಾಣಾಕುಶನೂರ ಸಮೀಪದ ಪ್ರವಾಸಿ ಮಂದಿರ ಹತ್ತಿರದ ತಾಂಡಾದಲ್ಲಿ ಪ್ರತಾಪ ಆಡೆ ಅವರ 15 ಆಡುಗಳು ಮೃತಪಟ್ಟಿವೆ. ಠಾಣಾಕುಶನೂರ ಪಿಎಸ್ಐ ವಿ.ಬಿ ಯಾದವಾಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.