ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಬೀದರ್‌: ಭಾಲ್ಕಿ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ

Published : 9 ಮೇ 2024, 6:09 IST
Last Updated : 9 ಮೇ 2024, 6:09 IST
ಫಾಲೋ ಮಾಡಿ
Comments
ಶಾಸಕ ಪ್ರಭು ಚವಾಣ್‌ ಅವರ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಮಾಡಿರುವ ಪೋಸ್ಟ್‌

ಶಾಸಕ ಪ್ರಭು ಚವಾಣ್‌ ಅವರ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಮಾಡಿರುವ ಪೋಸ್ಟ್‌

ಮತದಾನ ಮುಗಿದ ಬೆನ್ನಲ್ಲೇ ಸಕ್ರಿಯರಾದ ಪ್ರಭು ಚವಾಣ್‌
ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ಮತದಾನ ಮುಗಿದ ಬೆನ್ನಲ್ಲೇ ಔರಾದ್‌ ಬಿಜೆಪಿ ಶಾಸಕ ಪ್ರಭು ಚವಾಣ್‌ ಅವರು ಮತ್ತೆ ಸಕ್ರಿಯರಾಗಿದ್ದಾರೆ. ಸಾರ್ವಜನಿಕರ ಭೇಟಿಗೆ ಮುಂದಾಗಿದ್ದಾರೆ. ‘ಔರಾದ್‌ ತಾಲ್ಲೂಕಿನ ಬೋಂತಿ ತಾಂಡಾದ ಗೃಹ ಕಚೇರಿಯಲ್ಲಿ ಬುಧವಾರ (ಮೇ 8) ನಾನು ಸಾರ್ವಜನಿಕರ ಭೇಟಿಗೆ ಲಭ್ಯವಿದ್ದೇನೆ’ ಎಂದು ಅವರ ಫೇಸ್‌ಬುಕ್‌ ಅಧಿಕೃತ ಖಾತೆಯಲ್ಲಿ ವಿಷಯ ಹಂಚಿಕೊಂಡಿದ್ದಾರೆ. ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಭಗವಂತ ಖೂಬಾ ಅವರಿಗೆ ಟಿಕೆಟ್‌ ನೀಡಬಾರದು ಎಂದು ಚವಾಣ್‌ ಪಟ್ಟು ಹಿಡಿದಿದ್ದರು. ಅನೇಕ ವೇದಿಕೆಗಳಲ್ಲಿ ಅದನ್ನು ವಿರೋಧಿಸಿದ್ದರು. ಆದರೆ ಹೈಕಮಾಂಡ್‌ ಖೂಬಾ ಅವರಿಗೆ ಟಿಕೆಟ್‌ ನೀಡಿತ್ತು. ಟಿಕೆಟ್‌ ಘೋಷಣೆಯಾದ ದಿನವೇ ಚವಾಣ್‌ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು. ‘ಕನಿಷ್ಠ ಎರಡರಿಂದ ಮೂರು ತಿಂಗಳು ವಿಶ್ರಾಂತಿ ಮಾಡಬೇಕೆಂದು ವೈದ್ಯರು ಸಲಹೆ ಮಾಡಿದ್ದು ಅವರು ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ’ ಎಂದು ಬಿಜೆಪಿ ಮುಖಂಡರು ಹೇಳಿದ್ದರು. ಅದರಂತೆ ಅವರು ಪ್ರಚಾರ ಕಾರ್ಯದಲ್ಲೂ ಪಾಲ್ಗೊಂಡಿರಲಿಲ್ಲ. ಆದರೆ ಮತದಾನ ಮುಗಿದ ಮರುದಿನವೇ ಅವರು ಸಾರ್ವಜನಿಕರ ಭೇಟಿಗೆ ಮುಂದಾಗಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ. ಈ ಸಂಬಂಧ ಚವಾಣ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರ ಮೊಬೈಲ್‌ ಸ್ವಿಚ್‌ ಆಫ್‌ ಇತ್ತು.
ಅಭ್ಯರ್ಥಿಗಳು ‘ರಿಲ್ಯಾಕ್ಸ್‌’ ಮೂಡ್‌ನಲ್ಲಿ
ಜಿದ್ದಾಜಿದ್ದಿನ ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆದ ನಂತರ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ‘ರಿಲ್ಯಾಕ್ಸ್‌’ ಮೂಡ್‌ಗೆ ಜಾರಿದ್ದಾರೆ. ಕುಟುಂಬಸ್ಥರೊಂದಿಗೆ ಕೆಲಕಾಲ ಕಳೆದ ಇಬ್ಬರು ಮನೆಗೆ ಬಂದ ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ಚರ್ಚಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಅವರು ಬುಧವಾರ ಬೆಳಿಗ್ಗೆ ಅವರ ಭಾಲ್ಕಿಯ ಮನೆಯಲ್ಲಿ ಯೋಗ ಪ್ರಾಣಾಯಾಮ ಮಾಡಿದರು. ಮನೆಯಲ್ಲಿ ಬೆಳಗಿನ ಉಪಾಹಾರ ಮುಗಿಸಿಕೊಂಡು ಆನಂತರ ಬಿಕೆಐಟಿ ಕಾಲೇಜಿಗೆ ತೆರಳಿದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಯಾಗಿರುವ ಅವರು ಹಲವು ದಿನಗಳ ಬಳಿಕ ಕಾಲೇಜಿನಲ್ಲಿ ಕಾಣಿಸಿದರು. ಮಧ್ಯಾಹ್ನ ಊಟ ಮುಗಿಸಿಕೊಂಡು ಕಾರ್ಯಕರ್ತರೊಂದಿಗೆ ಭೇಟಿಯಾದರು. ‘ಮೇ 10ರ ವರೆಗೆ ಸ್ಥಳೀಯವಾಗಿಯೇ ಇರುತ್ತೇನೆ. ಆನಂತರ ಕೆಲಸದ ಅಂಗವಾಗಿ ಜಿಲ್ಲೆಯ ಹೊರಗೆ ಹೋಗುತ್ತಿರುವೆ’ ಎಂದು ಸಾಗರ್‌ ಖಂಡ್ರೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಸಹ ಬುಧವಾರ ಮನೆಯಲ್ಲಿಯೇ ಇದ್ದರು. ಬೆಳಗಿನ ಕರ್ಮಗಳನ್ನು ಮುಗಿಸಿ ಕೆಲಕಾಲ ಯೋಗ ಮಾಡಿದರು. ಆನಂತರ ತಮ್ಮ ಹಿತೈಶಿಗಳು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು ಎಂದು ಅವರ ಆಪ್ತರು ತಿಳಿಸಿದ್ದಾರೆ. ಅವರು ಕರೆಗೆ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT