ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಬಸವೇಶ್ವರ ದೇವಸ್ಥಾನದ ಮಹಾದ್ವಾರ ಮತ್ತು ಜೀರ್ಣೋದ್ಧಾರಗೊಂಡಿರುವ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವಾಗ ಮಠಾಧೀಶರೊಂದಿಗೆ ಸಚಿವ ಈಶ್ವರ ಖಂಡ್ರೆ ಪಾಲ್ಗೊಂಡಿದ್ದರು. ಶಾಸಕ ಶರಣು ಸಲಗರ ಇದ್ದರು
ದೇವಸ್ಥಾನ ಸಮಿತಿಯ ಎಲ್ಲರ ಸಹಕಾರ ಮತ್ತು ಪ್ರಯತ್ನದಿಂದಾಗಿಯೇ ಮಂಟಪದ ನವೀಕರಣ ಹಾಗೂ ಶಿಲೆಯ ಮಹಾದ್ವಾರ ನಿರ್ಮಾಣಕಾರ್ಯ ಉತ್ತಮವಾಗಿ ನೆರವೇರಿದೆ
ವಿವೇಕಾನಂದ ಹೊದಲೂರೆ ದೇವಸ್ಥಾನ ಸಮಿತಿ ಕಾರ್ಯದರ್ಶಿ
ಚಾಲುಕ್ಯ ಶೈಲಿಯ ಮಹಾದ್ವಾರ
ದೇವಸ್ಥಾನದ ಉತ್ತರಾಭಿಮುಖವಾಗಿ ಇರುವ ಸಭಾಮಂಟಪವನ್ನು ಪ್ರವೇಶಿಸುವ ಸ್ಥಳದಲ್ಲಿ ಚಾಲುಕ್ಯ ಶೈಲಿಯಲ್ಲಿ ಕೆತ್ತಿರುವ ಕಲ್ಲುಗಳಿಂದ ಎತ್ತರದ ಮಹಾದ್ವಾರ ನಿರ್ಮಿಸಲಾಗಿದೆ. ಕೋಟೆಗಳಿಗಿರುವಂತೆ ಕಟ್ಟಿಗೆಯ ದೊಡ್ಡ ಬಾಗಿಲು ಸಹ ಅಳವಡಿಸಲಾಗಿದೆ. ದ್ವಾರದ ಮೇಲೆ ಚಿಕ್ಕ ಶಿಲಾ ಗೋಪುರವೂ ಇದೆ. ಮಂಟಪದ ಒಳಾಂಗಣದಲ್ಲಿ ಕೆತ್ತನೆಯ ಕಂಬಗಳನ್ನು ಅಳವಡಿಸಲಾಗಿದೆ. ಗೋಡೆಗಳಿಗೆ ಬಣ್ಣ ಹಚ್ಚಲಾಗಿದ್ದು ಎಲ್ಲವೂ ಸುಂದರವಾಗಿ ಕಂಗೊಳಿಸುತ್ತಿದೆ. ಗರ್ಭಗೃಹದ ಮೇಲಿನ ಹಳೆಯ ಗೋಪುರವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.