<p><strong>ಔರಾದ್: </strong>ತಾಲ್ಲೂಕಿನಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಮುಂಗಾರು ಬೆಳೆ ಮೇಲೆ ಪರಿಣಾಮ ಬೀರುತ್ತಿದೆ. ಸೋಯಾ ಬೆಳೆಗಾರರು ಆತಂಕದಲ್ಲಿದ್ದಾರೆ.</p>.<p>ತಾಲ್ಲೂಕಿನ ರೈತರು ಸೋಯಾ ಬೆಳೆ ಮೇಲೆ ಅವಲಂಬಿಸಿದ್ದಾರೆ. ತಾಲ್ಲೂಕಿನ 80 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ 50 ಸಾವಿರ ಹೆಕ್ಟೇರ್ಗೂ ಅಧಿಕ ಸೋಯಾ ಬಿತ್ತನೆಯಾಗಿದೆ.</p>.<p>ಶೇ 90ರಷ್ಟು ಬಿತ್ತನೆಯಾಗಿ ಮೊಳಕೆ ಬಂದಿವೆ. ಈ ನಡುವೆ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗಿ ಹೊಲದಲ್ಲಿ ನೀರು ನಿಂತಿದೆ. ನೀರು ಜಾಸ್ತಿಯಾಗಿ ಸೋಯಾ ಮೊಳಕೆಕಂದು ಬಣ್ಣಕ್ಕೆ ತಿರುಗುತ್ತಿದ್ದು, ಇನ್ನು ಕೆಲ ದೀನ ಹೀಗೆ ಮಳೆಯಾದರೆ ಗತಿ ಏನು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.</p>.<p>‘ನಮ್ಮ ಭಾಗದಲ್ಲಿ ಜಾಸ್ತಿ ಮಳೆಯಾಗಿದೆ. ಕಳೆದ ಒಂದು ವಾರದಿಂದ ಎಲ್ಲ ಹೊಲಗಳಲ್ಲಿ ನೀರು ನಿಂತಿದೆ. ಈಗಾಗಲೇ ಉದ್ದು, ಹೆಸರು ಹಾಳಾಗಿದೆ. ಈಗ ಮಳೆ ಕಡಿಮೆಯಾಗದಿದ್ದಲ್ಲಿ ಸೋಯಾ ಬೆಳೆ ಹಾಳಾಗಲಿದೆ’ ಎಂದು ನಾಗೂರ ರೈತ ಸಂತೋಷ ಮಸ್ಕಲೆ ಕಳವಳ ವ್ಯಕ್ತಪಡಿಸಿದ್ದಾರೆ.</p>.<p>‘ಈ ವಾರ ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ. ಆದರೆ ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಗಿರೀಶ್ ತಿಳಿಸಿದ್ದಾರೆ.</p>.<p>ಈ ವಾರ ಔರಾದ್ ಹೋಬಳಿಯಲ್ಲಿ 66.6 ಮಿ.ಮೀ (38.9 ಮಿ.ಮೀ ಕಳೆದ ವರ್ಷ ಈ ವಾರ ಬಿದ್ದ ಮಳೆ), ಚಿಂತಾಕಿ-115.4ಮಿ.ಮೀ (38.5 ಮಿ.ಮೀ), ಸಂತಪುರ 92.3 (38) ಮಿ.ಮೀ ಮಳೆ ದಾಖಲಾಗಿದೆ.</p>.<p><strong>ರಸ್ತೆ ಸೇತುವೆ ಹಾಳು: </strong>ಭಾರಿ ಮಳೆಯಿಂದಾಗಿ ತಾಲ್ಲೂಕಿನ ವಿವಿಧೆಡೆ ರಸ್ತೆಗಳು ಹಾಳಾಗಿವೆ. ಸೇತುವೆಗಳು ಕುಸಿದು ಬಿದ್ದು ಸಂಚಾರ ಸಮಸ್ಯೆಯಾಗಿದೆ. ಸಂತಪುರ-ಕುಶನೂರ ನಡುವಿನ ನಾಗೂರ ಬಳಿಯ ಬದಲಿ ರಸ್ತೆ ಕಿತ್ತು ಹೋಗಿದೆ. ಇಲ್ಲಿ ಹೊಸದಾಗಿ ಸೇತುವೆ ನಿರ್ಮಿಸಬೇಕಾಗಿದೆ.</p>.<p>ಬೆಳಕುಣಿ ಬಳಿಯ ಸೇತುವೆ ಅರ್ಧ ಭಾಗ ಕುಸಿದು ಬಿದ್ದಿದೆ. ನಾಗೂರ (ಎಂ) ಬಳಿಯ ಸೇತುವೆ ಹಾಳಾಗಿದೆ. ರೈತರು ಹೊಲಕ್ಕೆ ಹೋಗುವ ಕಾಲು ದಾರಿ ಮಳೆಗೆ ಕೊಚ್ಚಿ ಹೋಗಿವೆ. ಇದರಿಂದ ರೈತರು ತಮ್ಮ ಹೊಲಕ್ಕೆ ಹೋಗಲು ಹರಸಾಹಸ ಮಾಡಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್: </strong>ತಾಲ್ಲೂಕಿನಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಮುಂಗಾರು ಬೆಳೆ ಮೇಲೆ ಪರಿಣಾಮ ಬೀರುತ್ತಿದೆ. ಸೋಯಾ ಬೆಳೆಗಾರರು ಆತಂಕದಲ್ಲಿದ್ದಾರೆ.</p>.<p>ತಾಲ್ಲೂಕಿನ ರೈತರು ಸೋಯಾ ಬೆಳೆ ಮೇಲೆ ಅವಲಂಬಿಸಿದ್ದಾರೆ. ತಾಲ್ಲೂಕಿನ 80 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ 50 ಸಾವಿರ ಹೆಕ್ಟೇರ್ಗೂ ಅಧಿಕ ಸೋಯಾ ಬಿತ್ತನೆಯಾಗಿದೆ.</p>.<p>ಶೇ 90ರಷ್ಟು ಬಿತ್ತನೆಯಾಗಿ ಮೊಳಕೆ ಬಂದಿವೆ. ಈ ನಡುವೆ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗಿ ಹೊಲದಲ್ಲಿ ನೀರು ನಿಂತಿದೆ. ನೀರು ಜಾಸ್ತಿಯಾಗಿ ಸೋಯಾ ಮೊಳಕೆಕಂದು ಬಣ್ಣಕ್ಕೆ ತಿರುಗುತ್ತಿದ್ದು, ಇನ್ನು ಕೆಲ ದೀನ ಹೀಗೆ ಮಳೆಯಾದರೆ ಗತಿ ಏನು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.</p>.<p>‘ನಮ್ಮ ಭಾಗದಲ್ಲಿ ಜಾಸ್ತಿ ಮಳೆಯಾಗಿದೆ. ಕಳೆದ ಒಂದು ವಾರದಿಂದ ಎಲ್ಲ ಹೊಲಗಳಲ್ಲಿ ನೀರು ನಿಂತಿದೆ. ಈಗಾಗಲೇ ಉದ್ದು, ಹೆಸರು ಹಾಳಾಗಿದೆ. ಈಗ ಮಳೆ ಕಡಿಮೆಯಾಗದಿದ್ದಲ್ಲಿ ಸೋಯಾ ಬೆಳೆ ಹಾಳಾಗಲಿದೆ’ ಎಂದು ನಾಗೂರ ರೈತ ಸಂತೋಷ ಮಸ್ಕಲೆ ಕಳವಳ ವ್ಯಕ್ತಪಡಿಸಿದ್ದಾರೆ.</p>.<p>‘ಈ ವಾರ ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ. ಆದರೆ ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಗಿರೀಶ್ ತಿಳಿಸಿದ್ದಾರೆ.</p>.<p>ಈ ವಾರ ಔರಾದ್ ಹೋಬಳಿಯಲ್ಲಿ 66.6 ಮಿ.ಮೀ (38.9 ಮಿ.ಮೀ ಕಳೆದ ವರ್ಷ ಈ ವಾರ ಬಿದ್ದ ಮಳೆ), ಚಿಂತಾಕಿ-115.4ಮಿ.ಮೀ (38.5 ಮಿ.ಮೀ), ಸಂತಪುರ 92.3 (38) ಮಿ.ಮೀ ಮಳೆ ದಾಖಲಾಗಿದೆ.</p>.<p><strong>ರಸ್ತೆ ಸೇತುವೆ ಹಾಳು: </strong>ಭಾರಿ ಮಳೆಯಿಂದಾಗಿ ತಾಲ್ಲೂಕಿನ ವಿವಿಧೆಡೆ ರಸ್ತೆಗಳು ಹಾಳಾಗಿವೆ. ಸೇತುವೆಗಳು ಕುಸಿದು ಬಿದ್ದು ಸಂಚಾರ ಸಮಸ್ಯೆಯಾಗಿದೆ. ಸಂತಪುರ-ಕುಶನೂರ ನಡುವಿನ ನಾಗೂರ ಬಳಿಯ ಬದಲಿ ರಸ್ತೆ ಕಿತ್ತು ಹೋಗಿದೆ. ಇಲ್ಲಿ ಹೊಸದಾಗಿ ಸೇತುವೆ ನಿರ್ಮಿಸಬೇಕಾಗಿದೆ.</p>.<p>ಬೆಳಕುಣಿ ಬಳಿಯ ಸೇತುವೆ ಅರ್ಧ ಭಾಗ ಕುಸಿದು ಬಿದ್ದಿದೆ. ನಾಗೂರ (ಎಂ) ಬಳಿಯ ಸೇತುವೆ ಹಾಳಾಗಿದೆ. ರೈತರು ಹೊಲಕ್ಕೆ ಹೋಗುವ ಕಾಲು ದಾರಿ ಮಳೆಗೆ ಕೊಚ್ಚಿ ಹೋಗಿವೆ. ಇದರಿಂದ ರೈತರು ತಮ್ಮ ಹೊಲಕ್ಕೆ ಹೋಗಲು ಹರಸಾಹಸ ಮಾಡಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>