‘ಕೋವಿಡ್ ಸೋಂಕಿತರಿಗೆ ಆಮ್ಲಜನಕದ ಕೊರತೆ ಆಗುತ್ತಿದೆ ಎಂದು ಕ್ಷೇತ್ರದ ಜನತೆ ಭಯಪಡುವುದು ಬೇಡ. ಎಂಥ ಪರಿಸ್ಥಿತಿಯಲ್ಲೂ 24 ಗಂಟೆಯೊಳಗೆ ನಮಗೆ ಆಮ್ಲಜನಕದ ಸಿಲಿಂಡರ್ಗಳು ದೊರಕುತ್ತವೆ. ಎಷ್ಟೇ ಕಷ್ಟವಾದರೂ ಅದನ್ನು ದೊರಕಿಸಿ ಕೊಡುವುದು ನನ್ನ ಜವಾಬ್ದಾರಿಯಾಗಿದೆ. ಹೀಗಾಗಿ ಇಲ್ಲಿನ ಯಾವುದೇ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಆಗುವುದಿಲ್ಲ. ಆದ್ದರಿಂದ ಎಲ್ಲರೂ ನಿಶ್ಚಿಂತರಾಗಿರಬೇಕು’ ಎಂದು ಅಭಯ ನೀಡಿದ್ದಾರೆ.