<p><strong>ಬೀದರ್</strong>: ನವದೆಹಲಿಯ ಇಂದಿರಾ ಕ್ರೀಡಾ ಭವನದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬೀದರ್ ಜಿಲ್ಲೆಯ ಮುಹಮ್ಮದ್ ಪರ್ವೇಜ್ ಖಾನ್ ಮುಹಮ್ಮದ್ ಅಯಾಜ್ ಖಾನ್ ಹಾಗೂ ನಿಶಿತ ರಾಜಶೇಖರ್ ಸಾವಳಗಿ ಅವರು ಉತ್ತಮ ಸಾಧನೆ ತೋರಿ ಪದಕ ಗಳಿಸಿದ್ದಾರೆ.</p>.<p>ಸ್ಪರ್ಧೆಯಲ್ಲಿ ರಾಜ್ಯದ ಒಟ್ಟು 16 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಪರ್ವೇಜ್ ಹಾಗೂ ನಿಶಿತ್ ಅವರು ಉತ್ತಮ ಸಾಧನೆ ತೋರಿ ರಾಜ್ಯ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಕ್ರೀಡಾ ತರಬೇತುದಾರ ಸುವಿತ್ ಎಸ್. ಮೋರೆ ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.</p>.<p>ನಿಶಿತ್ ಸಾವಳಗಿ ಅವರು ಜ್ಯೂನಿಯರ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಪರ್ವೇಜ್ ಖಾನ್ ಅವರು ಸೀನಿಯರ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ. ಪಾಕಿಸ್ತಾನ ಸೇರಿದಂತೆ ಇತರೆ 12 ರಾಷ್ಟ್ರಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು ಎಂದು ತಿಳಿಸಿದರು.</p>.<p>ಪತ್ರಕರ್ತ ಮುಹಮ್ಮದ್ ಮಸೂದ್, ಕರಾಟೆ ತರಬೇತುದಾರ ಸೂರ್ಯಕಾಂತ ಮೋರೆ ಹಾಜರಿದ್ದರು.</p>
<p><strong>ಬೀದರ್</strong>: ನವದೆಹಲಿಯ ಇಂದಿರಾ ಕ್ರೀಡಾ ಭವನದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬೀದರ್ ಜಿಲ್ಲೆಯ ಮುಹಮ್ಮದ್ ಪರ್ವೇಜ್ ಖಾನ್ ಮುಹಮ್ಮದ್ ಅಯಾಜ್ ಖಾನ್ ಹಾಗೂ ನಿಶಿತ ರಾಜಶೇಖರ್ ಸಾವಳಗಿ ಅವರು ಉತ್ತಮ ಸಾಧನೆ ತೋರಿ ಪದಕ ಗಳಿಸಿದ್ದಾರೆ.</p>.<p>ಸ್ಪರ್ಧೆಯಲ್ಲಿ ರಾಜ್ಯದ ಒಟ್ಟು 16 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಪರ್ವೇಜ್ ಹಾಗೂ ನಿಶಿತ್ ಅವರು ಉತ್ತಮ ಸಾಧನೆ ತೋರಿ ರಾಜ್ಯ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಕ್ರೀಡಾ ತರಬೇತುದಾರ ಸುವಿತ್ ಎಸ್. ಮೋರೆ ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.</p>.<p>ನಿಶಿತ್ ಸಾವಳಗಿ ಅವರು ಜ್ಯೂನಿಯರ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಪರ್ವೇಜ್ ಖಾನ್ ಅವರು ಸೀನಿಯರ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ. ಪಾಕಿಸ್ತಾನ ಸೇರಿದಂತೆ ಇತರೆ 12 ರಾಷ್ಟ್ರಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು ಎಂದು ತಿಳಿಸಿದರು.</p>.<p>ಪತ್ರಕರ್ತ ಮುಹಮ್ಮದ್ ಮಸೂದ್, ಕರಾಟೆ ತರಬೇತುದಾರ ಸೂರ್ಯಕಾಂತ ಮೋರೆ ಹಾಜರಿದ್ದರು.</p>