ಶರಣಕುಮಾರ ಬಾಲ್ಯದಿಂದಲೇ ಅಂಗವಿಕಲರಾದರೂ, ಚಿತ್ರಕಲೆ ಬಿಡಿಸುವುದರಲ್ಲಿ ಎತ್ತಿದ ಕೈ. ಈ ಭಾಗದ ಕನ್ನಡದ ಕಣ್ಮಣಿ, ಡಾ. ಚನ್ನಬಸವ ಪಟ್ಟದ್ದೇವರು ನಡೆದಾಡುವ ದೇವರೆಂದೇ ಖ್ಯಾತಿ ಪಡೆದ, ಜೀವನ ಸಾಧನೆ, ಮಾಡರ್ನ್ ಆರ್ಟ್, ಮದ್ಯಪಾನ ನಿಷೇಧ, ಶಿವ, ಸಾಯಿಬಾಬಾ, ಬಸವಣ್ಣ ವಚನ ಸಾರುವ ಚಿತ್ರ. ಪ್ರೇಮಿಗಳ ವಿರಹ ವೇದನೆಯ ಚಿತ್ರ ಸೇರಿದಂತೆ ಗ್ರಾಮೀಣ ಬದುಕಿನ ನೋಟ ಕುರಿತ ಚಿತ್ರಗಳನ್ನು ಬಿಡಿಸುವ ಮೂಲಕ ತಾಲ್ಲೂಕಿನಲ್ಲಿ ಪ್ರತಿಭಾವಂತ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.