ರಾಜ್ಯ ಮಟ್ಟದ ಮೊದಲನೇ ಬಿದರಿ ದತ್ತಿ ಪ್ರಶಸ್ತಿಯನ್ನು ಕಳೆದ ಬಾರಿ ಹಿರಿಯ ಖ್ಯಾತ ಸಂಗೀತಗಾರ ಬೀದರ್ ಜಿಲ್ಲೆಯ ಮೂಲದ ಪಂಡಿತ ವೈಕುಂಠ ದತ್ತ ಮಹಾರಾಜ ಅವರಿಗೆ ಕೊಡಲಾಗಿತ್ತು. ಇದೀಗ ಈ ಎರಡನೇ ವರ್ಷದ ಬಿದರಿ ದತ್ತಿ ಪ್ರಶಸಿ, ₹ 15 ಸಾವಿರ ನಗದು, ಪ್ರಶಸ್ತಿ ಫಲಕ, ಗೌರವ ಸನ್ಮಾನವನ್ನು ಕ್ಲಾರಿಯೊನೆಟ್ ವಾದಕ ಪಂಡಿತ್ ನರಸಿಂಹಲು ವಡವಾಟಿ ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಬಿದರಿ ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾವ್ ಸೌದಿ ತಿಳಿಸಿದ್ದಾರೆ.