ವಸತಿ ಯೋಜನೆಗಳ ಜಿಪಿಎಸ್ ಮಾಡಿಲ್ಲ. ಬಿಆರ್ಜಿಎಫ್ ಅಡಿಯಲ್ಲಿ ವಿತರಿಸಲಾದ ಮೊಬೈಲ್ ಫೋನ್ ಕಳೆದರೂ ಮಾಹಿತಿ ನೀಡಿಲ್ಲ. ಗ್ರಾಮ ಪಂಚಾಯಿತಿ ಸಭೆಗಳನ್ನು ನಿಯಮಿತವಾಗಿ ಕರೆದಿಲ್ಲ. ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಇದ್ದರೂ ಏಜೆನ್ಸಿಯ ಮೂಲಕ ಕೆಲಸ ಮಾಡಿಸಿ ಪಂಚಾಯಿತಿಯಿಂದ ವೆಚ್ಚ ಭರಿಸಿದ್ದಾರೆ ಎನ್ನುವ ಆರೋಪಗಳು ಅವರ ಮೇಲೆ ಇವೆ. ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಜ್ಞಾನು ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.