ಶರಣರ ವಚನಗಳು ಕೇಳಿಯೂ ಅಲ್ಲಿ ಇಲ್ಲಿ ಗುಡಿ ಗುಂಡಾರ ಸುತ್ತುವವರಿಗೆ ಬೇರೆ ಬಾವಿಯ ತೋಡಿ ಉಪ್ಪು ನೀರನುಂಬುವಂತೆ ಎನ್ನುತ್ತಾರೆ ಗುರು ಬಸವಣ್ಣ. ಶರಣರ ವಚನಗಳಿಗೆ ಕೆಲವರು ಶಾಸ್ತ್ರ ಎಂದರೆ ಇನ್ನೂ ಕೆಲವರು ಸಾಹಿತ್ಯ ಎನ್ನುತ್ತಾರೆ. ಆದರೆ ವಚನಗಳು ಸಾಹಿತ್ಯಕ್ಕೆ ಸಾಹಿತ್ಯವಾಗಿ, ಶಾಸ್ತ್ರಕ್ಕೆ ಶಾಸ್ತ್ರವಾಗಿ ತನ್ನದೆ ಅರ್ಥ ವಿಸ್ತಾರತೆ ಪಡೆಯುತ್ತಿದೆ ಎಂಬುವುದಷ್ಟೇ ಸತ್ಯ ಎಂದರು.