ಬೀದರ್: ಐತಿಹಾಸಿಕ ಸ್ಮಾರಕಗಳ ರಕ್ಷಣೆ ಕೆಲಸ ಆಗಬೇಕು ಎಂದು ಸುಲೆಪೇಟ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಬಾಗಾ ನುಡಿದರು.
ಇಲ್ಲಿಯ ಜನವಾಡ ರಸ್ತೆಯಲ್ಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಪರಂಪರೆ ಸಪ್ತಾಹ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ಗ್ರಾಮಗಳಲ್ಲೂ ಸ್ಮಾರಕಗಳು ಇವೆ. ಅವುಗಳ ಇತಿಹಾಸದ ಸಂಶೋಧನೆ ಅಗತ್ಯವಾಗಿದೆ ಎಂದು ಹೇಳಿದರು.
ಉತ್ಸವಗಳು ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನೆರವಾಗುತ್ತವೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಕಲಬುರಗಿಯ ಸರ್ಕಾರಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ. ಇಂದುಮತಿ ಪಾಟೀಲ ತಿಳಿಸಿದರು.
ಭಾರತದ ಪರಂಪರೆಗೆ ಶರಣರ ನಾಡು ಬೀದರ್ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದರು.
ಭಾರತವು ಶ್ರೀಮಂತ ಪರಂಪರೆ, ಸಂಸ್ಕೃತಿಯನ್ನು ಹೊಂದಿದೆ ಎಂದು ಪ್ರಾಚಾರ್ಯ ರಾಜಪ್ಪ ಬಬಚೇಡಿ ಹೇಳಿದರು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಭಾಗ್ಯವತಿ ಮಾತನಾಡಿದರು.
ಧನರಾಜ ತುಡಮೆ, ಪ್ರೊ. ಮನೋಜಕುಮಾರ, ಪಾರ್ವತಿ ಮೇತ್ರೆ, ಭೀಮಷಾ, ಮುನ್ನೆಮ್ಮ ಇದ್ದರು.