<p><strong>ಕಮಲನಗರ</strong>: ‘ತಮ್ಮ ದೈನಂದಿನ ಕೆಲಸ ಕಾರ್ಯಗಳೋಂದಿಗೆ ಸದಾ ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸುಂದರವಾದ ಜೀವನ ರೂಪಿಸಿಕೊಳ್ಳ ಬೇಕು’ ಎಂದು ಉದಗೀರ-ಡೋಣ ಗಾಂವ್ (ಎಂ) ಹಾವಗಿಸ್ವಾಮಿ ಮಠದ ಪೀಠಾಧ್ಯಕ್ಷರಾದ ಡಾ. ಶಂಭುಲಿಂಗ ಶಿವಾಚಾರ್ಯರು ಹೇಳಿದರು.</p>.<p>ತಾಲ್ಲೂಕಿನ ಡೋಣಗಾಂವ್(ಎಂ) ಗ್ರಾಮದ ಹೊರವಲಯದ ಭಕ್ತಮುಡಿ ಮಹಾಳಪ್ಪಯ್ಯನ ಸನ್ನಿಧಿಯಲ್ಲಿ ಈಚೆಗೆ ನರೇಗಾ ಯೋಜನೆಯಡಿ ಹಮ್ಮಿಕೊಂಡಿದ್ದ ಅಂದಾಜು ₹16 ಲಕ್ಷ ಅನುದಾನದಲ್ಲಿ ನೂತನ ಪುಷ್ಕರಣಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.</p>.<p>‘ಕಾಲಕಾಲಕ್ಕೆ ಬದಲಾವಣೆಗಳು ಕಾಣುತ್ತೇವೆ. ಅಶಾಂತಿ, ಅನ್ಯಾಯ ಹೆಚ್ಚಾದಲ್ಲಿ ಧರ್ಮ ಕಾರ್ಯಗಳು ಕಡಿಮೆಯಾಗಿ ಅಚ್ಚರಿಯ ಪರಿವರ್ತನೆಯಾಗುತ್ತೇವೆ. ಕೊರೊನಾ ವೈರಸ್ ಮುನುಕುಲವನ್ನೇ ಅಲುಗಾಡಿಸುತ್ತಿದೆ. ಜೀವ ಹಾನಿ ಸಂಭವಿಸುತ್ತಿವೆ’ ಎಂದರು.</p>.<p>ಡೋಣಗಾಂವ್ (ಎಂ) ಪಿಕೆಪಿಎಸ್ ಅಧ್ಯಕ್ಷ ಅಪ್ಪಾಸಾಬ್ ದೇಶಮುಖ ಮಾತನಾಡಿ, ‘ಭಕ್ತಮುಡಿಯ ಮಹಾಳಪ್ಪಯ್ಯ, ರಂಡ್ಯಾಳ ಚನ್ನಮಲ್ಲಪ್ಪ, ಡೋಣಗಾಂವ್ ಹಾವಗಿಸ್ವಾಮಿ ದೇವಸ್ಥಾನಗಳು ಭಕ್ತರಿಗೆ ಸ್ವರ್ಗವಾಗಿವೆ. ಈ ಮೂವರು ಮಹಾತ್ಮರು ಸಮಾಜದ ಏಳಿಗೆಗೆ ಮಹತ್ತರ ಕಾಣಿಕೆ ನೀಡಿದ್ದಾರೆ. ಈ ಪವಿತ್ರ ಕ್ಷೇತ್ರದಲ್ಲಿ ಭಕ್ತರಿಗೆ ಜಳಕ ಮಾಡಲು ಹರಿದು ಬರುವ ಹಳ್ಳದ ನೀರನ್ನು ನಿಲ್ಲಿಸಿ ಕಲ್ಯಾಣಿ ಪುಷ್ಕರಣಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ’ ಎಂದರು.</p>.<p>ಔರಾದ್ ತಾಲ್ಲೂಕು ಪಂಚಾಯಿತಿ ಇಒ ಮಾಣೀಕರಾವ ಪಾಟೀಲ, ಕಮಲನಗರ ತಾ.ಪಂ ಸಹಾಯಕ ನಿರ್ದೇಶಕ ಶಿವಾನಂದ ಔರಾದೆ, ಪಿಡಿಒ ದತ್ತಾತ್ರಿ ಪುಜಾರಿ, ಬಸವರಾಜ ಎಸ್. ಸೂರ್ಯವಂಶಿ, ಪ್ರವೀಣ, ಗಣೇಶ, ಗ್ರಾ.ಪಂ ಅಧ್ಯಕ್ಷ ಎಸ್.ಜೆ, ಉಪಾಧ್ಯಕ್ಷೆ ಪ್ರೇಮಾ ಗಂದಗೆ ಹಾಗೂ ಗ್ರಾ.ಪಂ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲನಗರ</strong>: ‘ತಮ್ಮ ದೈನಂದಿನ ಕೆಲಸ ಕಾರ್ಯಗಳೋಂದಿಗೆ ಸದಾ ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸುಂದರವಾದ ಜೀವನ ರೂಪಿಸಿಕೊಳ್ಳ ಬೇಕು’ ಎಂದು ಉದಗೀರ-ಡೋಣ ಗಾಂವ್ (ಎಂ) ಹಾವಗಿಸ್ವಾಮಿ ಮಠದ ಪೀಠಾಧ್ಯಕ್ಷರಾದ ಡಾ. ಶಂಭುಲಿಂಗ ಶಿವಾಚಾರ್ಯರು ಹೇಳಿದರು.</p>.<p>ತಾಲ್ಲೂಕಿನ ಡೋಣಗಾಂವ್(ಎಂ) ಗ್ರಾಮದ ಹೊರವಲಯದ ಭಕ್ತಮುಡಿ ಮಹಾಳಪ್ಪಯ್ಯನ ಸನ್ನಿಧಿಯಲ್ಲಿ ಈಚೆಗೆ ನರೇಗಾ ಯೋಜನೆಯಡಿ ಹಮ್ಮಿಕೊಂಡಿದ್ದ ಅಂದಾಜು ₹16 ಲಕ್ಷ ಅನುದಾನದಲ್ಲಿ ನೂತನ ಪುಷ್ಕರಣಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.</p>.<p>‘ಕಾಲಕಾಲಕ್ಕೆ ಬದಲಾವಣೆಗಳು ಕಾಣುತ್ತೇವೆ. ಅಶಾಂತಿ, ಅನ್ಯಾಯ ಹೆಚ್ಚಾದಲ್ಲಿ ಧರ್ಮ ಕಾರ್ಯಗಳು ಕಡಿಮೆಯಾಗಿ ಅಚ್ಚರಿಯ ಪರಿವರ್ತನೆಯಾಗುತ್ತೇವೆ. ಕೊರೊನಾ ವೈರಸ್ ಮುನುಕುಲವನ್ನೇ ಅಲುಗಾಡಿಸುತ್ತಿದೆ. ಜೀವ ಹಾನಿ ಸಂಭವಿಸುತ್ತಿವೆ’ ಎಂದರು.</p>.<p>ಡೋಣಗಾಂವ್ (ಎಂ) ಪಿಕೆಪಿಎಸ್ ಅಧ್ಯಕ್ಷ ಅಪ್ಪಾಸಾಬ್ ದೇಶಮುಖ ಮಾತನಾಡಿ, ‘ಭಕ್ತಮುಡಿಯ ಮಹಾಳಪ್ಪಯ್ಯ, ರಂಡ್ಯಾಳ ಚನ್ನಮಲ್ಲಪ್ಪ, ಡೋಣಗಾಂವ್ ಹಾವಗಿಸ್ವಾಮಿ ದೇವಸ್ಥಾನಗಳು ಭಕ್ತರಿಗೆ ಸ್ವರ್ಗವಾಗಿವೆ. ಈ ಮೂವರು ಮಹಾತ್ಮರು ಸಮಾಜದ ಏಳಿಗೆಗೆ ಮಹತ್ತರ ಕಾಣಿಕೆ ನೀಡಿದ್ದಾರೆ. ಈ ಪವಿತ್ರ ಕ್ಷೇತ್ರದಲ್ಲಿ ಭಕ್ತರಿಗೆ ಜಳಕ ಮಾಡಲು ಹರಿದು ಬರುವ ಹಳ್ಳದ ನೀರನ್ನು ನಿಲ್ಲಿಸಿ ಕಲ್ಯಾಣಿ ಪುಷ್ಕರಣಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ’ ಎಂದರು.</p>.<p>ಔರಾದ್ ತಾಲ್ಲೂಕು ಪಂಚಾಯಿತಿ ಇಒ ಮಾಣೀಕರಾವ ಪಾಟೀಲ, ಕಮಲನಗರ ತಾ.ಪಂ ಸಹಾಯಕ ನಿರ್ದೇಶಕ ಶಿವಾನಂದ ಔರಾದೆ, ಪಿಡಿಒ ದತ್ತಾತ್ರಿ ಪುಜಾರಿ, ಬಸವರಾಜ ಎಸ್. ಸೂರ್ಯವಂಶಿ, ಪ್ರವೀಣ, ಗಣೇಶ, ಗ್ರಾ.ಪಂ ಅಧ್ಯಕ್ಷ ಎಸ್.ಜೆ, ಉಪಾಧ್ಯಕ್ಷೆ ಪ್ರೇಮಾ ಗಂದಗೆ ಹಾಗೂ ಗ್ರಾ.ಪಂ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>