ಕಮಲನಗರ: ತಾಲ್ಲೂಕಿನ ವಿವಿಧೆಡೆ ಭಾನುವಾರ ಮಧ್ಯಾಹ್ನ 3.15ರಿಂದ ಸಂಜೆ 4.45ರವರೆಗೆ ಗುಡುಗು ಸಹಿತ ಮಳೆಯಾಗಿದೆ. ಮಳೆ ಜೊತೆಗೆ ವಿಪರೀತ ಗಾಳಿಯೂ ಬೀಸಿತು. ಬಿಸಿಲಿನ ಬೇಗೆಯ ವಾತಾವರಣ ಮಳೆಯಿಂದ ತಂಪಾಯಿತು.
ಕಮಲನಗರ, ಮದನೂರ, ಸೋನಾಳ, ಖತಗಾಂವ್ ಸೇರಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಸಾಧಾರಣ ಮಳೆ ಸುರಿಯಿತು. ಮೋಡ ಕವಿದ ವಾತಾವರಣವೂ ಇತ್ತು.
ಸಾಧಾರಣ ಮಳೆಯಾಗುತ್ತಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಕಮಲನಗರ ಕಂದಾಯ ನಿರೀಕ್ಷಕ ಪ್ರವೀಣ ಬಿರಾದಾರ ತಿಳಿಸಿದ್ದಾರೆ.