ಹಾಲಿ ಒಳಮೀಸಲಾತಿ ಪದ್ದತಿ ಬಲಗೈ ಸಮುದಾಯಗಳಿಗೆ ಮರಣ ಶಾಸನವಾಗಿದೆ. ರಾಜ್ಯ ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ಶೇ 90ರಷ್ಟು ಬಲಗೈ ಸಮುದಾಯದ ಮತ ಪಡೆದಿರುವ ಸರ್ಕಾರ ಈ ಸಮುದಾಯಕ್ಕೆ ನ್ಯಾಯ ಒದಗಿಬೇಕು.
ಅನಿಲ್ಕುಮಾರ್ ಬೆಲ್ದಾರ್ ಅಧ್ಯಕ್ಷ ಬಲಗೈ ಜಾತಿಗಳ ಒಕ್ಕೂಟ
ಕಾಂಗ್ರೆಸ್ ಸರ್ಕಾರಕ್ಕೆ ನಮ್ಮ ಮತಗಳು ಬೇಕು. ಆದರೆ ನಮ್ಮ ಏಳಿಗೆ ಬೇಕಿಲ್ಲ. ನಮ್ಮ ಸಮುದಾಯದ ಮಂತ್ರಿಗಳು ಸಮಾಜಕ್ಕೆ ಅನ್ಯಾಯ ಆಗುತ್ತಿದ್ದರೂ ದಿವ್ಯ ಮೌನ ವಹಿಸಿರುವುದು ದುರದೃಷ್ಟಕರ ಸಂಗತಿ.
ರಮೇಶ್ ಡಾಕುಳಗಿ ರಾಜ್ಯ ಸಂಘಟನಾ ಸಂಚಾಲಕ ದಸಂಸ
ಅವೈಜ್ಞಾನಿಕವಾಗಿರುವ ಒಳ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಜಾರಿಗೆ ಮಾಡಬಾರದು. ಒಂದುವೇಳೆ ಜಾರಿಗೊಳಿಸಿದರೆ ಬಲಗೈ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಬೇಕಾದೀತು.