ಬೀದರ್: ಆಝಾದಿ ಕಾ ಅಮೃತ ಮಹೋತ್ಸವ ಯುವಕ ಸಂಘವು ಇಲ್ಲಿಯ ಶಿವನಗರ ಸಮೀಪದ ಪಾದಚಾರಿ ಮಾರ್ಗದಲ್ಲಿ ಆಝಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಆಗಸ್ಟ್ 14 ರಂದು ಸಂಜೆ 7ಕ್ಕೆ ತಾಯಿ ಭಾರತಿಗೆ ಸಂಗೀತದಾರತಿ ಕಾರ್ಯಕ್ರಮ ಆಯೋಜಿಸಿದೆ.
ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆಗಳ ಗಾಯನ ಹಾಗೂ ನೃತ್ಯ ವೀಕ್ಷಕರ ಮನ ತಣಿಸಲಿವೆ. ದೇಶ ಭಕ್ತಿ ಗೀತೆ ಹಾಗೂ ನೃತ್ಯ ಪ್ರಸ್ತುತಪಡಿಸ ಬಯಸುವವರು ಮೊಬೈಲ್ ಸಂಖ್ಯೆ 8762164645, 9242366248 ಅಥವಾ 9606561475 ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇಶ ಭಕ್ತಿ ಗೀತೆಗಳ ಸವಿ ಅನುಭವಿಸಬೇಕು ಎಂದು ಆಝಾದಿ ಕಾ ಅಮೃತ ಮಹೋತ್ಸವ ಯುವಕ ಸಂಘದ ಮನ್ಮಥ ಕಾಡವಾದ, ಶ್ರೀಕಾಂತ ಮೋದಿ, ಸತ್ಯಪ್ರಕಾಶ, ಸಚ್ಚಿದಾನಂದ ಚಿದ್ರಿ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.