ಬಸವಕಲ್ಯಾಣ: ತಾಲ್ಲೂಕು ವಕೀಲರ (ಬಾರ್ ಅಸೋಶಿಯೇಷನ್) ಸಂಘದ ಅಧ್ಯಕ್ಷರಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಸಂಜೀವರೆಡ್ಡಿ ಯರಬಾಗ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ವಿಜಯ ವಟಗೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಬಿ. ಮಾಶಾಳಕರ್ ಆಯ್ಕೆಗೊಂಡರು. ಇನ್ನುಳಿದ ಎರಡು ಸ್ಥಾನಗಳಾದ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಜಿ.ಎಂ.ಸಾಗರ ಹಾಗೂ ಖಜಾಂಚಿಯಾಗಿ ಸುರೇಶ ಕಾಟೆ ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾ ಅಧಿಕಾರಿ ಸೂರ್ಯಕಾಂತ ಗಾಯಕವಾಡ ತಿಳಿಸಿದ್ದಾರೆ.