<p><strong>ಜನವಾಡ: </strong>‘ಮಹಾ ತಪಸ್ವಿ ಆಗಿದ್ದ ಶರಣ ವೀರಭದ್ರಪ್ಪ ಅವರು ದೇವರನ್ನು ಒಲಿಸಿಕೊಂಡಿದ್ದರು’ ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಅವರು ಹೇಳಿದರು.</p>.<p>ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಶರಣ ವೀರಭದ್ರಪ್ಪ ಅಪ್ಪ ಅವರ 75ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ವೀರಭದ್ರಪ್ಪ ಅವರ ಹೃದಯ ನಿರ್ಮಲವಾದದ್ದೇ ಅವರು ದೇವರ ಕೃಪೆಗೆ ಪಾತ್ರರಾಗಲು ಕಾರಣವಾಗಿತ್ತು ಎಂದು ಹೇಳಿದರು.</p>.<p>ದಾಸೋಹಕ್ಕೆ ಹೆಸರಾಗಿದ್ದರು. ಆಧ್ಯಾತ್ಮಿಕ ಕಾರ್ಯಕ್ರಮಗಳ ಮೂಲಕ ಜನರ ಮನ ಪರಿವರ್ತನೆ ಮಾಡುತ್ತಿದ್ದರು. ಭಕ್ತರ ಉದ್ಧಾರವೇ ಅವರ ಧ್ಯೇಯವಾಗಿತ್ತು ಎಂದು ತಿಳಿಸಿದರು.</p>.<p>ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಗಾಗಿ ಅಂತರಂಗ, ಬಹಿರಂಗ ಶುದ್ಧವಾಗಿರಬೇಕು. ದೇವರ ಕೃಪೆಗೆ ಪಾತ್ರರಾಗಲು ನಿತ್ಯ ಲಿಂಗಪೂಜೆ ಮಾಡಬೇಕು ಎಂದು ಅವರು ಹೇಳಿದರು.</p>.<p>ಮಹಾತ್ಮರ ಜೀವನ ಚರಿತ್ರೆ ಓದಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಜಗತ್ತು ತೋರಿಸಿದ ತಂದೆ-ತಾಯಿಯ ಸೇವೆ ಮಾಡಬೇಕು. ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.</p>.<p>ಗ್ರಾಮದ ಮುಖಂಡರಾದ ಸಂಗಮೇಶ ಪಾಟೀಲ, ದೀಪಕ್ ಗಾದಗೆ, ಮಾಣಿಕಪ್ಪ ಖಂಡ್ರೆ, ಮನೋಹರ ಬಾಬಶೆಟ್ಟಿ, ಶಿವಾನಂದ ಮಡಿವಾಳ, ರತೀಶ್ ಬೀರನಳ್ಳೆ, ಓಂಕಾರ ಬಾಬಶೆಟ್ಟಿ, ಜಗನ್ನಾಥ ರಿಕ್ಕೆ, ಬಸವ ಕುಂಬಾರ ಮೊದಲಾದವರು ಈ ವೇಳೆ ಪಾಲ್ಗೊಂಡಿದ್ದರು.</p>.<p>ಕಾರ್ಯಕ್ರಮದ ಆರಂಭದಲ್ಲಿ ಬಸವಲಿಂಗ ಅವಧೂತರು ಶರಣ ವೀರಭದ್ರಪ್ಪ ಅವರ ಮೂರ್ತಿಗೆ ಪೂಜೆ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜನವಾಡ: </strong>‘ಮಹಾ ತಪಸ್ವಿ ಆಗಿದ್ದ ಶರಣ ವೀರಭದ್ರಪ್ಪ ಅವರು ದೇವರನ್ನು ಒಲಿಸಿಕೊಂಡಿದ್ದರು’ ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಅವರು ಹೇಳಿದರು.</p>.<p>ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಶರಣ ವೀರಭದ್ರಪ್ಪ ಅಪ್ಪ ಅವರ 75ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ವೀರಭದ್ರಪ್ಪ ಅವರ ಹೃದಯ ನಿರ್ಮಲವಾದದ್ದೇ ಅವರು ದೇವರ ಕೃಪೆಗೆ ಪಾತ್ರರಾಗಲು ಕಾರಣವಾಗಿತ್ತು ಎಂದು ಹೇಳಿದರು.</p>.<p>ದಾಸೋಹಕ್ಕೆ ಹೆಸರಾಗಿದ್ದರು. ಆಧ್ಯಾತ್ಮಿಕ ಕಾರ್ಯಕ್ರಮಗಳ ಮೂಲಕ ಜನರ ಮನ ಪರಿವರ್ತನೆ ಮಾಡುತ್ತಿದ್ದರು. ಭಕ್ತರ ಉದ್ಧಾರವೇ ಅವರ ಧ್ಯೇಯವಾಗಿತ್ತು ಎಂದು ತಿಳಿಸಿದರು.</p>.<p>ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಗಾಗಿ ಅಂತರಂಗ, ಬಹಿರಂಗ ಶುದ್ಧವಾಗಿರಬೇಕು. ದೇವರ ಕೃಪೆಗೆ ಪಾತ್ರರಾಗಲು ನಿತ್ಯ ಲಿಂಗಪೂಜೆ ಮಾಡಬೇಕು ಎಂದು ಅವರು ಹೇಳಿದರು.</p>.<p>ಮಹಾತ್ಮರ ಜೀವನ ಚರಿತ್ರೆ ಓದಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಜಗತ್ತು ತೋರಿಸಿದ ತಂದೆ-ತಾಯಿಯ ಸೇವೆ ಮಾಡಬೇಕು. ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.</p>.<p>ಗ್ರಾಮದ ಮುಖಂಡರಾದ ಸಂಗಮೇಶ ಪಾಟೀಲ, ದೀಪಕ್ ಗಾದಗೆ, ಮಾಣಿಕಪ್ಪ ಖಂಡ್ರೆ, ಮನೋಹರ ಬಾಬಶೆಟ್ಟಿ, ಶಿವಾನಂದ ಮಡಿವಾಳ, ರತೀಶ್ ಬೀರನಳ್ಳೆ, ಓಂಕಾರ ಬಾಬಶೆಟ್ಟಿ, ಜಗನ್ನಾಥ ರಿಕ್ಕೆ, ಬಸವ ಕುಂಬಾರ ಮೊದಲಾದವರು ಈ ವೇಳೆ ಪಾಲ್ಗೊಂಡಿದ್ದರು.</p>.<p>ಕಾರ್ಯಕ್ರಮದ ಆರಂಭದಲ್ಲಿ ಬಸವಲಿಂಗ ಅವಧೂತರು ಶರಣ ವೀರಭದ್ರಪ್ಪ ಅವರ ಮೂರ್ತಿಗೆ ಪೂಜೆ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>