<p><strong>ಬಸವಕಲ್ಯಾಣ</strong>: ‘ಜ್ಞಾನಿಗಳ ಸೃಷ್ಟಿ ಅನುಭವ ಮಂಟಪದ ಉದ್ದೇಶವಾಗಿತ್ತು. ಜ್ಞಾನಾಧಾರಿತ ಭಕ್ತಿಯಿಂದ ಜೀವನ ಪಾವನಗೊಳ್ಳುತ್ತದೆ’ ಎಂದು ನಿವೃತ್ತ ಡೀನ್ ಡಾ.ಅಮರನಾಥ ಸೋಲಪುರೆ ಹೇಳಿದರು.</p>.<p>ನಗರದ ಶರಣ ಹರಳಯ್ಯ ಗವಿಯಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರದಿಂದ ಮಂಗಳವಾರ ನಡೆದ ಎರಡನೇ ದಿನದ ಶರಣ ವಿಜಯೋತ್ಸವದ ‘ಅನುಭವ ಮಂಟಪ ಜಗತ್ತಿನ ಪ್ರಥಮ ಸಂಸತ್ತು’ ಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ವೈಚಾರಿಕತೆ ಬೆಳೆಸಿಕೊಳ್ಳಬೇಕು. ಪ್ರಗತಿಪರರಾದರೆ ಮಾತ್ರ ಜೀವನ ಪರಿಪೂರ್ಣಗೊಳ್ಳುತ್ತದೆ. ಸತ್ಯಶುದ್ಧ ಕಾಯಕ, ದಾಸೋಹ ಕೈಗೊಳ್ಳಬೇಕು. ಸಕಲ ಜೀವಾತ್ಮರಿಗೆ ಲೇಸು ಬಯಸುವಂತಾಗಬೇಕು. 770 ಅಮರಗಣಂಗಳಿಂದ ಕೂಡಿದ್ದ ಬಸವಣ್ಣನವರ ಅನುಭವ ಮಂಟಪ ಜಗತ್ತಿನ ಪ್ರಥಮ ಸಂಸತ್ತು ಎನ್ನುವುದಕ್ಕೆ ಅನೇಕ ಸಾಕ್ಷಾಧಾರಗಳಿವೆ’ ಎಂದರು.</p>.<p>ಹುಲಸೂರ ಶಿವಾನಂದ ಸ್ವಾಮೀಜಿ ಮಾತನಾಡಿ,‘ಅಂತರಂಗ, ಬಹಿರಂಗ ಶುದ್ಧವಾಗಿರಬೇಕು. ಬಸವತತ್ವದ ಆಚರಣೆಯಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ಸಾಧ್ಯ’ ಎಂದರು.</p>.<p>ಉದ್ಯಮಿ ಧನರಾಜ ತಾಳಂಪಳ್ಳಿ ಮಾತನಾಡಿ,‘ಶರಣ ತತ್ವದ ಪ್ರಸಾರಕ್ಕಾಗಿ ಅನುಭವ ಮಂಟಪ ಅಗತ್ಯವಾಗಿದೆ. ಆದ್ದರಿಂದ ಸರ್ಕಾರ ನೂತನ ಮಂಟಪ ನಿರ್ಮಿಸುತ್ತಿರುವುದು ಸಂತಸ ತಂದಿದೆ’ ಎಂದರು.</p>.<p>ಶರಣ ಹರಳಯ್ಯ ಪೀಠಾಧ್ಯಕ್ಷೆ ಡಾ.ಗಂಗಾಂಬಿಕಾ ಅಕ್ಕ, ಡಾ.ಜಿ.ಎಸ್.ಭುರಳೆ, ವಕೀಲರ ಸಂಘದ ಅಧ್ಯಕ್ಷ ಸಂಜೀವರೆಡ್ಡಿ ಯರಬಾಗ, ಸುಭಾಷ ಹೊಳಕುಂದೆ, ಬಸವರಾಜ ಕೋರಕೆ, ಮಲ್ಲಿಕಾರ್ಜುನ ಚಿರಡೆ, ರವಿ ಕೊಳಕೂರ, ಡಾ.ರುದ್ರಮಣಿ ಮಠಪತಿ, ಬಸವರಾಜ ಖಂಡಾಳೆ ಹಾಗೂ ಜಗನ್ನಾಥ ಕನಶೆಟ್ಟೆ ಇದ್ದರು.</p>.<p>ಉದ್ಘಾಟನೆ: ಇದಕ್ಕೂ ಮೊದಲು ಔಸಾ ಗುರುಬಾಬಾ ಮಹಾರಾಜ ಶರಣ ವಿಜಯೋತ್ಸವ ಉದ್ಘಾಟಿಸಿದರು. ಶಾಸಕ ಶರಣು ಸಲಗರ, ಡಾ.ಗಂಗಾಂಬಿಕಾ ಅಕ್ಕ, ಅನಿಲಕುಮಾರ ರಗಟೆ, ಶಿವರಾಜ ನರಶೆಟ್ಟಿ, ಸಂಜೀವ ವಾಡಿಕರ್, ಅನಿಲ ಭೂಸಾರೆ, ನರಸಿಂಗರೆಡ್ಡಿ ಗದ್ಲೇಗಾಂವ ಮೊದಲಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ</strong>: ‘ಜ್ಞಾನಿಗಳ ಸೃಷ್ಟಿ ಅನುಭವ ಮಂಟಪದ ಉದ್ದೇಶವಾಗಿತ್ತು. ಜ್ಞಾನಾಧಾರಿತ ಭಕ್ತಿಯಿಂದ ಜೀವನ ಪಾವನಗೊಳ್ಳುತ್ತದೆ’ ಎಂದು ನಿವೃತ್ತ ಡೀನ್ ಡಾ.ಅಮರನಾಥ ಸೋಲಪುರೆ ಹೇಳಿದರು.</p>.<p>ನಗರದ ಶರಣ ಹರಳಯ್ಯ ಗವಿಯಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರದಿಂದ ಮಂಗಳವಾರ ನಡೆದ ಎರಡನೇ ದಿನದ ಶರಣ ವಿಜಯೋತ್ಸವದ ‘ಅನುಭವ ಮಂಟಪ ಜಗತ್ತಿನ ಪ್ರಥಮ ಸಂಸತ್ತು’ ಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ವೈಚಾರಿಕತೆ ಬೆಳೆಸಿಕೊಳ್ಳಬೇಕು. ಪ್ರಗತಿಪರರಾದರೆ ಮಾತ್ರ ಜೀವನ ಪರಿಪೂರ್ಣಗೊಳ್ಳುತ್ತದೆ. ಸತ್ಯಶುದ್ಧ ಕಾಯಕ, ದಾಸೋಹ ಕೈಗೊಳ್ಳಬೇಕು. ಸಕಲ ಜೀವಾತ್ಮರಿಗೆ ಲೇಸು ಬಯಸುವಂತಾಗಬೇಕು. 770 ಅಮರಗಣಂಗಳಿಂದ ಕೂಡಿದ್ದ ಬಸವಣ್ಣನವರ ಅನುಭವ ಮಂಟಪ ಜಗತ್ತಿನ ಪ್ರಥಮ ಸಂಸತ್ತು ಎನ್ನುವುದಕ್ಕೆ ಅನೇಕ ಸಾಕ್ಷಾಧಾರಗಳಿವೆ’ ಎಂದರು.</p>.<p>ಹುಲಸೂರ ಶಿವಾನಂದ ಸ್ವಾಮೀಜಿ ಮಾತನಾಡಿ,‘ಅಂತರಂಗ, ಬಹಿರಂಗ ಶುದ್ಧವಾಗಿರಬೇಕು. ಬಸವತತ್ವದ ಆಚರಣೆಯಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ಸಾಧ್ಯ’ ಎಂದರು.</p>.<p>ಉದ್ಯಮಿ ಧನರಾಜ ತಾಳಂಪಳ್ಳಿ ಮಾತನಾಡಿ,‘ಶರಣ ತತ್ವದ ಪ್ರಸಾರಕ್ಕಾಗಿ ಅನುಭವ ಮಂಟಪ ಅಗತ್ಯವಾಗಿದೆ. ಆದ್ದರಿಂದ ಸರ್ಕಾರ ನೂತನ ಮಂಟಪ ನಿರ್ಮಿಸುತ್ತಿರುವುದು ಸಂತಸ ತಂದಿದೆ’ ಎಂದರು.</p>.<p>ಶರಣ ಹರಳಯ್ಯ ಪೀಠಾಧ್ಯಕ್ಷೆ ಡಾ.ಗಂಗಾಂಬಿಕಾ ಅಕ್ಕ, ಡಾ.ಜಿ.ಎಸ್.ಭುರಳೆ, ವಕೀಲರ ಸಂಘದ ಅಧ್ಯಕ್ಷ ಸಂಜೀವರೆಡ್ಡಿ ಯರಬಾಗ, ಸುಭಾಷ ಹೊಳಕುಂದೆ, ಬಸವರಾಜ ಕೋರಕೆ, ಮಲ್ಲಿಕಾರ್ಜುನ ಚಿರಡೆ, ರವಿ ಕೊಳಕೂರ, ಡಾ.ರುದ್ರಮಣಿ ಮಠಪತಿ, ಬಸವರಾಜ ಖಂಡಾಳೆ ಹಾಗೂ ಜಗನ್ನಾಥ ಕನಶೆಟ್ಟೆ ಇದ್ದರು.</p>.<p>ಉದ್ಘಾಟನೆ: ಇದಕ್ಕೂ ಮೊದಲು ಔಸಾ ಗುರುಬಾಬಾ ಮಹಾರಾಜ ಶರಣ ವಿಜಯೋತ್ಸವ ಉದ್ಘಾಟಿಸಿದರು. ಶಾಸಕ ಶರಣು ಸಲಗರ, ಡಾ.ಗಂಗಾಂಬಿಕಾ ಅಕ್ಕ, ಅನಿಲಕುಮಾರ ರಗಟೆ, ಶಿವರಾಜ ನರಶೆಟ್ಟಿ, ಸಂಜೀವ ವಾಡಿಕರ್, ಅನಿಲ ಭೂಸಾರೆ, ನರಸಿಂಗರೆಡ್ಡಿ ಗದ್ಲೇಗಾಂವ ಮೊದಲಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>