ಬೇಲೂರ ಗ್ರಾಮದ ರೈತ ಮಹಿಳೆ ಕಲಾವತಿ ಅವರ ಹೊಲದಲ್ಲಿನ ಕಬ್ಬು ಸಾಗಣೆ ವೇಳೆ 20 ಟನ್ನಷ್ಟು ಕಬ್ಬು ಹಾಗೆ ಬಿಟ್ಟು ಹೋಗಿದ್ದರು. ಇದರಿಂದ ಸಿಟ್ಟಿಗೆದ್ದ ರೈತರು ಗ್ರಾಮಕ್ಕೆ ಆಗಮಿಸಿದ ಕಾರ್ಖಾನೆ ಸಿಬ್ಬಂದಿ ಅನ್ಸಾರಿಯನ್ನು ಕೂಡಿ ಹಾಕಿದರು. ಸ್ಥಳಕ್ಕೆ ಆಗಮಿಸಿದ ಸಂತಪುರ ಪೊಲೀಸರು ಸಮಾಧಾನ ಮಾಡಿ ನ್ಯಾಯ ಕೊಡಿಸುವುದಾಗಿ ಹೇಳಿದರು.