ಬೀದರ್: ಮಾತು ಮನಸ್ಸನ್ನು ಅರಳಿಸಬೇಕು. ಕೆರಳಿಸಬಾರದು. ಮಾತು ಆತ್ಮೋನ್ನತಿಗೆ ಕಾರಣವಾಗಬೇಕು. ವಂಚನೆ ತುಂಬಿದ ಮಾತು ಜೀವನ ನರಕಾಗಿಸುತ್ತದೆ. ಸ್ವಾರ್ಥರಹಿತ ಮಾತು ಪ್ರೀತಿಯ ಮಾಧುರ್ಯದ ಮಾತು ಹೃದಯ ತುಂಬಿಕೊಳ್ಳುತ್ತದೆ. “ಮಾತೆಂಬುದು ಜ್ಯೋತಿರ್ಲಿಂಗ” ಎಂದು ಪ್ರಭುದೇವರು ಹೇಳಿದರು. “ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಲಿಂಗಮೆಚ್ಚಿ ಅಹುದು ಅಹುದು ಎನ್ನಬೇಕು” ಎಂದು ಬಸವಣ್ಣನವರು ಹೇಳಿದರು. ಚುಚ್ಚುಮಾತನಾಡುವುದಕ್ಕಿಂತ ಬಿಚ್ಚು ಮಾತನಾಡಬೇಕು.