‘ಕೆರೆ ಭಾಗದಲ್ಲಿ ಎತ್ತರದ ಗೋಡೆ ನಿರ್ಮಿಸಿ ಮಣ್ಣನ್ನು ಭರ್ತಿ ಮಾಡಿಕೊಂಡು ಜಾಗವನ್ನು ಸಮತಟ್ಟುಗೊಳಿಸಲಾಗಿದೆ. ಈಚೆಗೆ ದೊಡ್ಡದಾದ ತಗಡುಗಳ ಮಂಟಪ ನಿರ್ಮಿಸಲಾಗಿದೆ. ಈ ಕಾರಣ ಇಲ್ಲಿ ಮದುವೆ ಇತ್ಯಾದಿ ಕಾರ್ಯಕ್ರಗಳು ನಡೆಯುವಂತಾಗಿದೆ. ಹಾಳಾಗಿದ್ದ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯದಲ್ಲಿ ಕರಬಸಪ್ಪ ಪಟ್ನೆ, ಸೂರ್ಯಕಾಂತ ಕಡಲೆ, ನಾರಾಯಣರೆಡ್ಡಿ, ಕಿರಣ ಮೂಲಗೆ, ರವಿ ಪಟ್ನೆ, ಅನಿಲರೆಡ್ಡಿ ಶೇರಿಕಾರ, ರಾಜೀವ ಗೋರಟೆ, ಅಹ್ಮದಪಾಶಾ, ಸೂರ್ಯಕಾಂತ ಮಠ, ನಾಗಶೆಟ್ಟಿ ಪಟ್ನೆ, ಮಲ್ಲಿಕಾರ್ಜುನ ಹಲಶೆಟ್ಟೆ ಮುಂತಾದವರು ಶ್ರಮವಹಿಸಿದ್ದಾರೆ’ ಎಂದರು.