ಗೋರ್ಟಾ(ಬಿ) (ಹುಲಸೂರ): ಬಸವ ಜಯಂತಿ ಅಂಗವಾಗಿ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಶನಿವಾರದಿಂದ (ಮೇ.7), 17ರವರೆಗೂ ಪ್ರತಿದಿನ ಸಂಜೆ 7ಕ್ಕೆ ಪ್ರಭು ದೇವರು ಅವರು ‘ವಚನ ಜೀವನ’ದ ಕುರಿತು ಪ್ರವಚನ ನೀಡಲಿದ್ದಾರೆ.
ಗ್ರಾಮದ ಸುತ್ತಲಿನ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಶರಣರ ತತ್ವ ಆಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಕ್ಕ ಅನ್ನಪೂರ್ಣ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.