<p><strong>ಭಾಲ್ಕಿ</strong>: ‘ವಚನಗಳು ಶ್ರೇಷ್ಠ ಮಂತ್ರಗಳು, ನೆಮ್ಮದಿಯ ಬದುಕಿನ ಸೂತ್ರಗಳು. ವಚನಗಳನ್ನು ತಲೆ ಮೇಲೆ ಹೊತ್ತು ವಚನ ವಿಜಯೋತ್ಸವವನ್ನು ಆಚರಿಸಿ ವಚನಗಳಿಗೆ ಪಟ್ಟಕಟ್ಟಿದ ಕೀರ್ತಿ ಅಕ್ಕ ಅನ್ನಪೂರ್ಣತಾಯಿಗೆ ಸಲ್ಲುತ್ತದೆ’ ಎಂದು ಪ್ರಭುದೇವ ಸ್ವಾಮೀಜಿ ಹೇಳಿದರು.</p>.<p>ಸಿದ್ದಾಪುರವಾಡಿಯಲ್ಲಿ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ, 17ನೇ ವಚನ ವಿಜಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>‘ಅಕ್ಕ ಅನ್ನಪೂರ್ಣತಾಯಿ ಸರಳತೆಯ ಸಾಕಾರ ಮೂರ್ತಿ ಆಗಿದ್ದರು. ಜಿಲ್ಲೆಯ ಕೀರ್ತಿ ನಾಡಿನಾದ್ಯಂತ ಹಬ್ಬಿಸಿದ್ದರು. ವಚನ ಪಠಣ ಅಭಿಯಾನ, ಶಿವಯೋಗ ಸಾಧಕರ ಕೂಟ, ಬಸವ ಭಾರತಿ ಸಂಸ್ಕಾರ ಶಿಬಿರ, ವಚನ ವಿಜಯೋತ್ಸವ ಕಾರ್ಯಕ್ರಮ ಮಾಡುತ್ತಾ ಶರಣತತ್ವ ಜನ ಮಾನಸದಲ್ಲಿ ಬಿತ್ತಿದರು’ ಎಂದು ತಿಳಿಸಿದರು.</p>.<p>‘ಅಕ್ಕನವರ ಸಂಕಲ್ಪದಂತೆ ಹಳ್ಳಿ ಹಳ್ಳಿಗಳಲ್ಲಿ ವಚನ ವಿಜಯೋತ್ಸವ ಆಚರಿಸುವ ಸಂಕಲ್ಪದೊಂದಿಗೆ 770 ಪ್ರವಚನಗಳನ್ನು ಮಾಡುತ್ತಾ ಶರಣರ ತ್ಯಾಗ, ಬಲಿದಾನದ ವೀರಗಾಥೆ ಸಾರುವ ಸಂಕಲ್ಪ ತೊಟ್ಟಿದ್ದೇವೆ’ ಎಂದು ತಿಳಿಸಿದರು.</p>.<p>ರಾಜಕುಮಾರ ಪಾಟೀಲ, ಸಾಹಿತಿ ರಮೇಶ ಮಠಪತಿ, ಪ್ರಕಾಶ ಮಠಪತಿ, ಅಣವೀರ ಕೋಡಂಬಲ್, ಸಿ.ಎಸ್.ಗಣಾಚಾರಿ, ಅಶೋಕ ಎಲಿ, ಆರ್.ಕೆ.ಪಾಟೀಲ, ಶಿವಕುಮಾರ ಪಾಟೀಲ, ಸಿದ್ದರಾಮಪ್ಪ ಕಪಲಾಪುರೆ, ಸಂಜು ಕುಮಾರ, ಸಿದ್ದರಾಮಪ್ಪ ಪಾಟೀಲ, ಮಾಣಿಕಪ್ಪ ಗೋರನಾಳೆ, ಸಂಗಮೇಶ ಪಾಟೀಲ ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ</strong>: ‘ವಚನಗಳು ಶ್ರೇಷ್ಠ ಮಂತ್ರಗಳು, ನೆಮ್ಮದಿಯ ಬದುಕಿನ ಸೂತ್ರಗಳು. ವಚನಗಳನ್ನು ತಲೆ ಮೇಲೆ ಹೊತ್ತು ವಚನ ವಿಜಯೋತ್ಸವವನ್ನು ಆಚರಿಸಿ ವಚನಗಳಿಗೆ ಪಟ್ಟಕಟ್ಟಿದ ಕೀರ್ತಿ ಅಕ್ಕ ಅನ್ನಪೂರ್ಣತಾಯಿಗೆ ಸಲ್ಲುತ್ತದೆ’ ಎಂದು ಪ್ರಭುದೇವ ಸ್ವಾಮೀಜಿ ಹೇಳಿದರು.</p>.<p>ಸಿದ್ದಾಪುರವಾಡಿಯಲ್ಲಿ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ, 17ನೇ ವಚನ ವಿಜಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>‘ಅಕ್ಕ ಅನ್ನಪೂರ್ಣತಾಯಿ ಸರಳತೆಯ ಸಾಕಾರ ಮೂರ್ತಿ ಆಗಿದ್ದರು. ಜಿಲ್ಲೆಯ ಕೀರ್ತಿ ನಾಡಿನಾದ್ಯಂತ ಹಬ್ಬಿಸಿದ್ದರು. ವಚನ ಪಠಣ ಅಭಿಯಾನ, ಶಿವಯೋಗ ಸಾಧಕರ ಕೂಟ, ಬಸವ ಭಾರತಿ ಸಂಸ್ಕಾರ ಶಿಬಿರ, ವಚನ ವಿಜಯೋತ್ಸವ ಕಾರ್ಯಕ್ರಮ ಮಾಡುತ್ತಾ ಶರಣತತ್ವ ಜನ ಮಾನಸದಲ್ಲಿ ಬಿತ್ತಿದರು’ ಎಂದು ತಿಳಿಸಿದರು.</p>.<p>‘ಅಕ್ಕನವರ ಸಂಕಲ್ಪದಂತೆ ಹಳ್ಳಿ ಹಳ್ಳಿಗಳಲ್ಲಿ ವಚನ ವಿಜಯೋತ್ಸವ ಆಚರಿಸುವ ಸಂಕಲ್ಪದೊಂದಿಗೆ 770 ಪ್ರವಚನಗಳನ್ನು ಮಾಡುತ್ತಾ ಶರಣರ ತ್ಯಾಗ, ಬಲಿದಾನದ ವೀರಗಾಥೆ ಸಾರುವ ಸಂಕಲ್ಪ ತೊಟ್ಟಿದ್ದೇವೆ’ ಎಂದು ತಿಳಿಸಿದರು.</p>.<p>ರಾಜಕುಮಾರ ಪಾಟೀಲ, ಸಾಹಿತಿ ರಮೇಶ ಮಠಪತಿ, ಪ್ರಕಾಶ ಮಠಪತಿ, ಅಣವೀರ ಕೋಡಂಬಲ್, ಸಿ.ಎಸ್.ಗಣಾಚಾರಿ, ಅಶೋಕ ಎಲಿ, ಆರ್.ಕೆ.ಪಾಟೀಲ, ಶಿವಕುಮಾರ ಪಾಟೀಲ, ಸಿದ್ದರಾಮಪ್ಪ ಕಪಲಾಪುರೆ, ಸಂಜು ಕುಮಾರ, ಸಿದ್ದರಾಮಪ್ಪ ಪಾಟೀಲ, ಮಾಣಿಕಪ್ಪ ಗೋರನಾಳೆ, ಸಂಗಮೇಶ ಪಾಟೀಲ ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>