ಬೀದರ್: ‘ನಗರದ ಹೌಸಿಂಗ್ ಬೋರ್ಡ್ ಕಾಲೊನಿಯ ನೀರಿನ ತೀವ್ರ ಸಮಸ್ಯೆಯನ್ನು ಗಮನಕ್ಕೆ ತಂದರೂ ಬಗೆಹರಿಸಿಲ್ಲ. ಜನ ರೋಸಿ ಹೋಗಿದ್ದಾರೆ. ಕಾಲೊನಿಗೆ ಬಂದರೆ ನಿಮ್ಮನ್ನು ಕೂಡಿ ಹಾಕಿ ಹೊಡೆಸುತ್ತೇನೆ...’
ಇಲ್ಲಿಯ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕುಡಿಯುವ ನೀರಿನ ಚರ್ಚೆ ವೇಳೆ ದಿನದ 24 ಗಂಟೆ ಕುಡಿಯುವ ನೀರು ಯೋಜನೆಯ ಅಧಿಕಾರಿಗೆ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಬೆದರಿಸಿದ್ದು ಹೀಗೆ.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ‘ನನಗೆ ಹೊಡೆದರೆ ನೀರು ಸಿಗುವುದಾದರೆ ನನ್ನನ್ನು ಹೊಡೆಸಿ ಸರ್’ ಎಂದು ಉತ್ತರಿಸಿದಾಗ ಸಭೆಯಲ್ಲಿ ನಗೆಯ ಅಲೆ ಎದ್ದಿತು.