ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಭಾರತ ಯಶಸ್ವಿಗೆ ಶೌಚಾಲಯ ಪೂರಕ: ಶಾಸಕ

Last Updated 16 ಜುಲೈ 2017, 10:47 IST
ಅಕ್ಷರ ಗಾತ್ರ

ಔರಾದ್:  ಸ್ವಚ್ಛ ಭಾರತ ಯೋಜನೆ ಯಶಸ್ವಿಗೆ ಪ್ರತಿ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಶಾಸಕ ಪ್ರಭು ಚವಾಣ್ ಹೇಳಿದರು. ತಾಲ್ಲೂಕಿನ ಎಕಂಬಾ ಗ್ರಾಮದಲ್ಲಿ ಶುಕ್ರವಾರ ನಡೆದ ಬಿಜೆಪಿ ವಿಸ್ತಾರಕ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಯುವ ಘಟಕದ ಜಿಲ್ಲಾ ಅಧ್ಯಕ್ಷ ಕಿರಣ ಪಾಟೀಲ ಮಾತನಾಡಿ, ವಿಸ್ತಾರ ಯೋಜನೆ ಅಂದರೆ ಕೇವಲ ಪಕ್ಷದ ಪ್ರಚಾರ ಅಷ್ಟೇ ಅಲ್ಲ. ಜನರಿಗೆ ಅನುಕೂಲವಾಗುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತೀಶ ಪಾಟೀಲ ಮಾತನಾಡಿ, ಫಸಲ್ ವಿಮಾ ಯೋಜನೆ, ಉಜ್ವಲ ಯೋಜನೆ, ಜನಧನ ಯೋಜನೆ ಸೇರಿದಂತೆ ಕೇಂದ್ರದ ಯೋಜನೆಗಳು ಜನರಿಗೆ ತಿಳಿ ಹೇಳುವುದರ ಜತೆಗೆ ಅವರಿಗೆ ಆ ಯೋಜನೆ ಉಪಯೋಗ ದೊರೆಯುಂತೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಜಿ.ಪಂ. ಸದಸ್ಯ ಮಾರುತಿ ಚವಾಣ್, ಗ್ರಾ.ಪಂ. ಅಧ್ಯಕ್ಷ ನಿವೃತ್ತಿ ಪಾಟೀಲ, ತಾ.ಪಂ. ಸದಸ್ಯ ಸಚಿನ್ ರಾಠೋಡ, ಅಶೋಕ ಅಲ್ಮಾಜೆ, ರಮೇಶ ಉಪಾಸೆ, ಅಕ್ಷಯ ಪಾಟೀಲ, ಹಣಮಂತ, ನಿವೃತ್ತಿ ಪಾಟೀಲ, ಅಮರ ಜಾಧವ್, ಬಾಲಾಜಿ ಥಾವರೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT