ಶವ ಸಂಸ್ಕಾರ ಮಾಡುವುದನ್ನು ಹಾಗೂ ಗೋರಿ ಕಟ್ಟುವುದನ್ನು ಪ್ರಶ್ನಿಸಲು ಹೋದ ಸ್ಥಳೀಯ ನಿವಾಸಿಗಳ ಮೇಲೆ ಕ್ರೈಸ್ತ ಸಮುದಾಯದವರು ದಬ್ಬಾಳಿಕೆ ಮಾಡಿ, ಬೆದರಿಕೆ ಹಾಕಿ, ಹಲ್ಲೆ ಮಾಡಲು ಮುಂದಾಗುತ್ತಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಆದರೆ ಗುಂಡ್ಲುಪೇಟೆಯ ಇತಿಹಾಸದಲ್ಲೇ ಕ್ರೈಸ್ತ ಸಮುದಾಯದವರು ಹೀಗೆ ದಬ್ಬಾಳಿಕೆ ಮಾಡಿ, ಬೆದರಿಕೆ ಹಾಕಿ, ಹಲ್ಲೆ ನಡೆಸಲು ಮುಂದಾದ ಉದಾಹರಣೆಗಳಿಲ್ಲ. ಕ್ರೈಸ್ತ ಸಮುದಾಯವು ಶಾಂತಿ, ಸಮಾಧಾನ, ಸಹನೆಗೆ ಹೆಸರಾಗಿದ್ದು, ನಮ್ಮಿಂದ ಇಂತಹ ಯಾವುದೇ ಕೃತ್ಯಗಳು ಜರುಗಿಲ್ಲ ಎಂದು ಸ್ಪಷ್ಟಪಡಿಸಿದರು.