ಪತಿ ಸೈನಿಕರಾಗಿದ್ದವರು. ಮಕ್ಕಳು ಹೈದರಾಬಾದ್ ಮತ್ತು ಮೈಸೂರಿನಲ್ಲಿ ಇದ್ದು, ದೇಶಸೇವೆಯ ಮಾತನಾಡುತ್ತಾರೆ. ಇವರ ಸ್ಫೂರ್ತಿದಾಯಕ ಮಾತುಗಳು ಕೆಲಸ ಮಾಡುವ ಉತ್ಸಾಹತುಂಬುತ್ತವೆ. ಸೇವೆಗೆ ಅರ್ಪಿಸಿಕೊಂಡ ಬಹಳಷ್ಟು ನರ್ಸ್ಗಳು ಸದಾ ಜೊತೆಯಲ್ಲಿ ಇದ್ದು,ಸುಲಲಿತ ಕೆಲಸಗಳಿಗೆ ನೆರವಾಗುತ್ತಾರೆ. 30 ವರ್ಷಗಳ ಸೇವೆಯಲ್ಲಿಕಂಡು-ಕೇಳರಿಯದ ಸಂಕಷ್ಟವನ್ನು ದೇಶ ಮತ್ತು ಜನ ಸಮುದಾಯ ಇಂದು ಎದುರಿಸುತ್ತದೆ. ಇಂತಹ ಸಮಯ ಜನರೊಟ್ಟಿಗಿದ್ದು, ರೋಗಿಗಳಿಗೆ ನೈತಿಕ ಬೆಂಬಲ ನೀಡಬೇಕು. ಇಂತಹ ಸಮಯಕರ್ತವ್ಯಕ್ಕೆ ಬೆನ್ನುಹಾಕಿದರೆ ವೃತ್ತಿಗೆ ಅಪಮಾನ ಮಾಡಿದಂತೆ.