<p><strong>ಯಳಂದೂರು: </strong>‘ರೋಗಿಗಳ ಸೇವೆ ಮಾಡಲು ನನಗೆ ಇಂದು ಹೆಚ್ಚುಶಕ್ತಿ ಕೊಡು. ಯಾವ ಕಾಯಿಲೆ ಪೀಡಿತರಿಗೂ, ಶುಶ್ರೂಷೆ ನೀಡುತ್ತೇವೆ...'</p>.<p>–ಪ್ರತಿ ದಿನ ಬೆಳಕು ಹರಿಯುವಾಗ ನಾನು ಪ್ರಾರ್ಥಿಸುವುದು ಇಷ್ಟೇ.</p>.<p>ಆಸ್ಪತ್ರೆಗೆ ಪ್ರತಿದಿನ ನೂರಾರು ಜನರು ಚಿಕಿತ್ಸೆಗೆ ಬರತ್ತಾರೆ. ನಿತ್ಯವೂ ಕೋವಿಡ್ಪರೀಕ್ಷೆ ಮತ್ತು ಸೋಂಕಿತರನ್ನು ಪತ್ತೆ ಹಚ್ಚಬೇಕು. ಕೋವಿಡ್ ವಾರ್ ರೂಂ ಈಗಷ್ಟೇಆರಂಭವಾಗಿದೆ. ಇಲ್ಲಿ ಸೋಂಕಿತರಿಗೆ ಧೈರ್ಯ ತುಂಬಿ ಹೋಂ ಐಸೊಲೇಷನ್ಗೆ ಕಳುಹಿಸಬೇಕು.</p>.<p>ಆಗಾಗ ಬರುವ ಸರ್ಕಾರಿ ಸುತ್ತೋಲೆಗಳಿಗೆ ವರದಿ ಒಪ್ಪಿಸಬೇಕು. ಇದಕ್ಕೆಲ್ಲ ತಾಳ್ಮೆಬೇಕು. ಕುಟುಂಬದವರು ಮತ್ತು ಆಸ್ಪತ್ರೆಯ ಮುಖ್ಯಸ್ಥ ಡಾ.ಶ್ರೀಧರ್ ಅವರ ಬೆಂಬಲ ನಮಗೆಆತ್ಮವಿಶ್ವಾಸ ನೀಡುತ್ತದೆ. ಕೆಲಸಗಳಿಗೆ ಊರುಗೋಲಾಗಿ ನಿಲ್ಲುತ್ತದೆ.</p>.<p>ಪತಿ ಸೈನಿಕರಾಗಿದ್ದವರು. ಮಕ್ಕಳು ಹೈದರಾಬಾದ್ ಮತ್ತು ಮೈಸೂರಿನಲ್ಲಿ ಇದ್ದು, ದೇಶಸೇವೆಯ ಮಾತನಾಡುತ್ತಾರೆ. ಇವರ ಸ್ಫೂರ್ತಿದಾಯಕ ಮಾತುಗಳು ಕೆಲಸ ಮಾಡುವ ಉತ್ಸಾಹತುಂಬುತ್ತವೆ. ಸೇವೆಗೆ ಅರ್ಪಿಸಿಕೊಂಡ ಬಹಳಷ್ಟು ನರ್ಸ್ಗಳು ಸದಾ ಜೊತೆಯಲ್ಲಿ ಇದ್ದು,ಸುಲಲಿತ ಕೆಲಸಗಳಿಗೆ ನೆರವಾಗುತ್ತಾರೆ. 30 ವರ್ಷಗಳ ಸೇವೆಯಲ್ಲಿಕಂಡು-ಕೇಳರಿಯದ ಸಂಕಷ್ಟವನ್ನು ದೇಶ ಮತ್ತು ಜನ ಸಮುದಾಯ ಇಂದು ಎದುರಿಸುತ್ತದೆ. ಇಂತಹ ಸಮಯ ಜನರೊಟ್ಟಿಗಿದ್ದು, ರೋಗಿಗಳಿಗೆ ನೈತಿಕ ಬೆಂಬಲ ನೀಡಬೇಕು. ಇಂತಹ ಸಮಯಕರ್ತವ್ಯಕ್ಕೆ ಬೆನ್ನುಹಾಕಿದರೆ ವೃತ್ತಿಗೆ ಅಪಮಾನ ಮಾಡಿದಂತೆ.</p>.<p>ಈಗ ಆಸ್ಪತ್ರೆಗೆ ಬರುತ್ತಲೇ ಕೆಲಸದ ಒತ್ತಡ ಹೆಚ್ಚಾಗುತ್ತದೆ.ಆರಂಭದಲ್ಲಿ ಇದ್ದ ಕೋವಿಡ್ಭಯ ನಮ್ಮನ್ನು ಈಗ ಕಾಡುತ್ತಿಲ್ಲ. ಆದರೂ, ನಾವು ಸುರಕ್ಷಿತರಾಗಿದ್ದು, ಜನರ ಆರೋಗ್ಯಸುಧಾರಣೆಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.</p>.<p>(ಯಳಂದೂರು ತಾಲ್ಲೂಕು ಆಸ್ಪತ್ರೆಯ ಶುಶ್ರೂಷಕಿಯರ ಮುಖ್ಯಸ್ಥೆ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು: </strong>‘ರೋಗಿಗಳ ಸೇವೆ ಮಾಡಲು ನನಗೆ ಇಂದು ಹೆಚ್ಚುಶಕ್ತಿ ಕೊಡು. ಯಾವ ಕಾಯಿಲೆ ಪೀಡಿತರಿಗೂ, ಶುಶ್ರೂಷೆ ನೀಡುತ್ತೇವೆ...'</p>.<p>–ಪ್ರತಿ ದಿನ ಬೆಳಕು ಹರಿಯುವಾಗ ನಾನು ಪ್ರಾರ್ಥಿಸುವುದು ಇಷ್ಟೇ.</p>.<p>ಆಸ್ಪತ್ರೆಗೆ ಪ್ರತಿದಿನ ನೂರಾರು ಜನರು ಚಿಕಿತ್ಸೆಗೆ ಬರತ್ತಾರೆ. ನಿತ್ಯವೂ ಕೋವಿಡ್ಪರೀಕ್ಷೆ ಮತ್ತು ಸೋಂಕಿತರನ್ನು ಪತ್ತೆ ಹಚ್ಚಬೇಕು. ಕೋವಿಡ್ ವಾರ್ ರೂಂ ಈಗಷ್ಟೇಆರಂಭವಾಗಿದೆ. ಇಲ್ಲಿ ಸೋಂಕಿತರಿಗೆ ಧೈರ್ಯ ತುಂಬಿ ಹೋಂ ಐಸೊಲೇಷನ್ಗೆ ಕಳುಹಿಸಬೇಕು.</p>.<p>ಆಗಾಗ ಬರುವ ಸರ್ಕಾರಿ ಸುತ್ತೋಲೆಗಳಿಗೆ ವರದಿ ಒಪ್ಪಿಸಬೇಕು. ಇದಕ್ಕೆಲ್ಲ ತಾಳ್ಮೆಬೇಕು. ಕುಟುಂಬದವರು ಮತ್ತು ಆಸ್ಪತ್ರೆಯ ಮುಖ್ಯಸ್ಥ ಡಾ.ಶ್ರೀಧರ್ ಅವರ ಬೆಂಬಲ ನಮಗೆಆತ್ಮವಿಶ್ವಾಸ ನೀಡುತ್ತದೆ. ಕೆಲಸಗಳಿಗೆ ಊರುಗೋಲಾಗಿ ನಿಲ್ಲುತ್ತದೆ.</p>.<p>ಪತಿ ಸೈನಿಕರಾಗಿದ್ದವರು. ಮಕ್ಕಳು ಹೈದರಾಬಾದ್ ಮತ್ತು ಮೈಸೂರಿನಲ್ಲಿ ಇದ್ದು, ದೇಶಸೇವೆಯ ಮಾತನಾಡುತ್ತಾರೆ. ಇವರ ಸ್ಫೂರ್ತಿದಾಯಕ ಮಾತುಗಳು ಕೆಲಸ ಮಾಡುವ ಉತ್ಸಾಹತುಂಬುತ್ತವೆ. ಸೇವೆಗೆ ಅರ್ಪಿಸಿಕೊಂಡ ಬಹಳಷ್ಟು ನರ್ಸ್ಗಳು ಸದಾ ಜೊತೆಯಲ್ಲಿ ಇದ್ದು,ಸುಲಲಿತ ಕೆಲಸಗಳಿಗೆ ನೆರವಾಗುತ್ತಾರೆ. 30 ವರ್ಷಗಳ ಸೇವೆಯಲ್ಲಿಕಂಡು-ಕೇಳರಿಯದ ಸಂಕಷ್ಟವನ್ನು ದೇಶ ಮತ್ತು ಜನ ಸಮುದಾಯ ಇಂದು ಎದುರಿಸುತ್ತದೆ. ಇಂತಹ ಸಮಯ ಜನರೊಟ್ಟಿಗಿದ್ದು, ರೋಗಿಗಳಿಗೆ ನೈತಿಕ ಬೆಂಬಲ ನೀಡಬೇಕು. ಇಂತಹ ಸಮಯಕರ್ತವ್ಯಕ್ಕೆ ಬೆನ್ನುಹಾಕಿದರೆ ವೃತ್ತಿಗೆ ಅಪಮಾನ ಮಾಡಿದಂತೆ.</p>.<p>ಈಗ ಆಸ್ಪತ್ರೆಗೆ ಬರುತ್ತಲೇ ಕೆಲಸದ ಒತ್ತಡ ಹೆಚ್ಚಾಗುತ್ತದೆ.ಆರಂಭದಲ್ಲಿ ಇದ್ದ ಕೋವಿಡ್ಭಯ ನಮ್ಮನ್ನು ಈಗ ಕಾಡುತ್ತಿಲ್ಲ. ಆದರೂ, ನಾವು ಸುರಕ್ಷಿತರಾಗಿದ್ದು, ಜನರ ಆರೋಗ್ಯಸುಧಾರಣೆಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.</p>.<p>(ಯಳಂದೂರು ತಾಲ್ಲೂಕು ಆಸ್ಪತ್ರೆಯ ಶುಶ್ರೂಷಕಿಯರ ಮುಖ್ಯಸ್ಥೆ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>