<p><strong>ಯಳಂದೂರು:</strong> ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಸುತ್ತ ಭಾನುವಾರ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆಯಾಗಿದೆ. ಪೋಡುಗಳ ಸುತ್ತಲಿನ ತೋಟಗಳಲ್ಲಿ ಮಳೆ ಹನಿಗೆ ಕಾಫಿ ಗಿಡದಲ್ಲಿ ಹೂವು ಅರಳಿ ಕಂಪು ಬೀರುತ್ತಿವೆ.</p>.<p>ಶನಿವಾರ ಸಂಜೆಯಿಂದಲೇ ಉಷ್ಣಾಂಶದಲ್ಲಿ ಇಳಿಕೆಯಾಗಿತ್ತು. ಬಿಸಿಲು, ಚಳಿ ಹಾಗೂ ಶೀತಗಾಳಿ ಬೀಸಿದ್ದು, ತಂಪು ಹವೆ ಮುಂದುವರಿದಿದೆ, ಜನ ಮತ್ತು ಜಾನುವಾರು ಸಾಕಣೆದಾರರು ಬೆಚ್ಚನೆ ಉಡುಪುಗಳನ್ನು ತೊಟ್ಟು ಪಶುಸಂಗೋಪನ ಕಾರ್ಯಕ್ಕೆ ತೆರಳಿದರು.</p>.<p>ಜ.25 ರಿಂದ ಎರಡು ದಿನ ರಾಜ್ಯದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ರಾತ್ರಿ ಅಥವಾ ನಸುಕಿನ ವೇಳೆ ಅಲ್ಲಲ್ಲಿ ತುಂತುರು ಮಳೆ ಸುರಿಯುವ ಮುನ್ಸೂಚನೆ ಇದೆ. ಮೋಡ ಕವಿದ ವಾತಾವರಣ ಮುಂದುವರಿಯಲಿದೆ.</p>.<p>ತಮಿಳುನಾಡು ಮೂಲಕ ದಕ್ಷಿಣ ಕರ್ನಾಟಕ ಒಳನಾಡಿಗೆ ತೇವಾಂಶಯುಕ್ತ ಗಾಳಿ ಪ್ರವೇಶಿಸುವ ಸಾಧ್ಯತೆ ಇದೆ. ಹಾಗಾಗಿ, ಒಂದೆರಡು ಕಡೆ ತುಂತುರು ಮಳೆಯಿಂದ ಹಗುರವಾದ ಮಳೆ ಬೀಳಲಿದೆ.</p>.<div><blockquote>‘ಸಾಮಾನ್ಯವಾಗಿ ಜನವರಿಯಲ್ಲಿ ಮಳೆ ಸುರಿಯುವುದಿಲ್ಲ. ಫೆಬ್ರುವರಿ ನಂತರ ವರ್ಷಧಾರೆಯಾದಲ್ಲಿ ಕಾಫಿ ಇಳುವರಿ ಹೆಚ್ಚಾಗಲಿದೆ’ </blockquote><span class="attribution"> ಬೊಮ್ಮಯ್ಯ ಕೃಷಿಕ </span></div>.<div><blockquote>‘ರೈತರು ಕಟಾವಿಗೆ ಸಿದ್ಧವಾಗಿರುವ ಭತ್ತ ಜೋಳ ಮುಸುಕಿನಜೋಳ ಮತ್ತಿತರ ಬೆಳೆಗಳ ರಕ್ಷಣೆಗೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು’ </blockquote><span class="attribution">ಎ. ವೆಂಕಟರಂಗಶೆಟ್ಟಿ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು:</strong> ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಸುತ್ತ ಭಾನುವಾರ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆಯಾಗಿದೆ. ಪೋಡುಗಳ ಸುತ್ತಲಿನ ತೋಟಗಳಲ್ಲಿ ಮಳೆ ಹನಿಗೆ ಕಾಫಿ ಗಿಡದಲ್ಲಿ ಹೂವು ಅರಳಿ ಕಂಪು ಬೀರುತ್ತಿವೆ.</p>.<p>ಶನಿವಾರ ಸಂಜೆಯಿಂದಲೇ ಉಷ್ಣಾಂಶದಲ್ಲಿ ಇಳಿಕೆಯಾಗಿತ್ತು. ಬಿಸಿಲು, ಚಳಿ ಹಾಗೂ ಶೀತಗಾಳಿ ಬೀಸಿದ್ದು, ತಂಪು ಹವೆ ಮುಂದುವರಿದಿದೆ, ಜನ ಮತ್ತು ಜಾನುವಾರು ಸಾಕಣೆದಾರರು ಬೆಚ್ಚನೆ ಉಡುಪುಗಳನ್ನು ತೊಟ್ಟು ಪಶುಸಂಗೋಪನ ಕಾರ್ಯಕ್ಕೆ ತೆರಳಿದರು.</p>.<p>ಜ.25 ರಿಂದ ಎರಡು ದಿನ ರಾಜ್ಯದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ರಾತ್ರಿ ಅಥವಾ ನಸುಕಿನ ವೇಳೆ ಅಲ್ಲಲ್ಲಿ ತುಂತುರು ಮಳೆ ಸುರಿಯುವ ಮುನ್ಸೂಚನೆ ಇದೆ. ಮೋಡ ಕವಿದ ವಾತಾವರಣ ಮುಂದುವರಿಯಲಿದೆ.</p>.<p>ತಮಿಳುನಾಡು ಮೂಲಕ ದಕ್ಷಿಣ ಕರ್ನಾಟಕ ಒಳನಾಡಿಗೆ ತೇವಾಂಶಯುಕ್ತ ಗಾಳಿ ಪ್ರವೇಶಿಸುವ ಸಾಧ್ಯತೆ ಇದೆ. ಹಾಗಾಗಿ, ಒಂದೆರಡು ಕಡೆ ತುಂತುರು ಮಳೆಯಿಂದ ಹಗುರವಾದ ಮಳೆ ಬೀಳಲಿದೆ.</p>.<div><blockquote>‘ಸಾಮಾನ್ಯವಾಗಿ ಜನವರಿಯಲ್ಲಿ ಮಳೆ ಸುರಿಯುವುದಿಲ್ಲ. ಫೆಬ್ರುವರಿ ನಂತರ ವರ್ಷಧಾರೆಯಾದಲ್ಲಿ ಕಾಫಿ ಇಳುವರಿ ಹೆಚ್ಚಾಗಲಿದೆ’ </blockquote><span class="attribution"> ಬೊಮ್ಮಯ್ಯ ಕೃಷಿಕ </span></div>.<div><blockquote>‘ರೈತರು ಕಟಾವಿಗೆ ಸಿದ್ಧವಾಗಿರುವ ಭತ್ತ ಜೋಳ ಮುಸುಕಿನಜೋಳ ಮತ್ತಿತರ ಬೆಳೆಗಳ ರಕ್ಷಣೆಗೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು’ </blockquote><span class="attribution">ಎ. ವೆಂಕಟರಂಗಶೆಟ್ಟಿ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>