ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಈರುಳ್ಳಿ ಬೆಲೆ ಏರುಮುಖ, ತೊಗರಿಕಾಯಿ ಸುಗ್ಗಿ

Published : 30 ಅಕ್ಟೋಬರ್ 2023, 16:17 IST
Last Updated : 30 ಅಕ್ಟೋಬರ್ 2023, 16:17 IST
ಫಾಲೋ ಮಾಡಿ
Comments
ಹೂವಿಗೆ ಬೇಡಿಕೆ ಕುಸಿತ
ಆಯುಧಪೂಜೆ ವಿಜಯದಶಮಿ ಸಂದರ್ಭದಲ್ಲಿ ಏರಿಕೆ ಕಂಡಿದ್ದ ಹೂವುಗಳ ಧಾರಣೆ ಹಬ್ಬದ ನಂತರ ಗಣನೀಯವಾಗಿ ಇಳಿಕೆಯಾಗಿದೆ.  ಚೆಂಡುಹೂ ಸೇವಂತಿಗೆ ಸುಗಂಧರಾಜ ಹೂವುಗಳನ್ನು ಕೇಳುವವರೇ ಇಲ್ಲದಂತಾಗಿದೆ.  ನಗರದ ಚೆನ್ನಿಪುರದಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕೆಜಿ ಕನಾಂಬರಕ್ಕೆ ₹400ರಿಂ ₹500ರವರೆಗೆ ಬೆಲೆ ಇತ್ತು. ಮಲ್ಲಿಗೆಗೆ ₹200ವರೆಗೆ ಇತ್ತು. ಸೇವಂತಿಗೆಗೆ ಕೆಜಿಗೆ ₹10ರಿಂದ ₹20 ಇತ್ತು. ಚೆಂಡು ಹೂವಿನ ಗರಿಷ್ಠ ಬೆಲೆ ₹10. ಸುಗಂಧರಾಜ ಹೂವಿಗೆ ಕೆಜಿಗೆ ₹30 ಧಾರಣೆ ಇತ್ತು. ಬಟನ್‌ ಗುಲಾಬಿಯೂ ₹80ಕ್ಕೆ ಸಿಗು‌ತ್ತಿತ್ತು.  ‘ಹಬ್ಬದ ಬಳಿಕ ಬೇಡಿಕೆ ದಿಢೀರ್‌ ಕುಸಿದಿದೆ. ಹಾಗಾಗಿ ಬೆಲೆ ಕಡಿಮೆಯಾಗಿದೆ. ದೀಪಾವಳಿವರೆಗೆ ಇದೇ ಪರಿಸ್ಥಿತಿ ಇರಲಿದೆ. ದೀಪಾವಳಿ ಆ ಬಳಿಕ ಕಾರ್ತಿಕ ಮಾಸ ಇರುವುದರಿಂದ ಬೇಡಿಕೆ ಹೆಚ್ಚಾಗಲಿದ್ದು ಬೆಲೆಯೂ ಜಾಸ್ತಿಯಾಗಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT