‘ಸಾವಿರಾರು ರೂಪಾಯಿ ಸಾಲ ಮಾಡಿ ಮುಸುಕಿನ ಜೋಳ ಬಿತ್ತನೆ ಮಾಡಿದ್ದೆ. ಗೊಬ್ಬರ, ನೀರು ಹರಿಸಿ ರಾತ್ರಿ ಫಸಲು ಕಾಯುತ್ತಿದ್ದೆ. ಉತ್ತಮ ಇಳುವರಿ ಕೈ ಸೇರುವ ನಿರೀಕ್ಷೆ ಇತ್ತು. ಹಸಿ ಮೇವು ಪಡೆಯಲು ಮುಂಗಡ ನೀಡಿದ್ದರು. ಈ ಹಂತದಲ್ಲಿ ಐವತ್ತಕ್ಕೂ ಹೆಚ್ಚಿನ ಕೋರೆ ಹಂದಿ ಮತ್ತಿತರ ಪ್ರಾಣಿಗಳು ಬೆಳೆಯೊಳಗೆ ನುಗ್ಗಿ ಹಾಳು ಮಾಡಿದ್ದು, ಆರ್ಥಿಕ ನಷ್ಟ ಉಂಟಾಗಿದೆ. ಅರಣ್ಯ ಇಲಾಖೆ ಫಸಲು ನಷ್ಟ ಭರಿಸಿಕೊಡಬೇಕು’ ಎಂದು ಬೆಳೆಗಾರ ಪ್ರದೀಪ್ ನಾಯಕ್ ಅಳಲು ತೋಡಿಕೊಂಡರು.