‘ಈ ಮೊದಲು ಸ್ಥಳೀಯ (ಪಿ.ಆರ್) ನಿವಾಸಿಗಳು ಬೆಳೆ ಸಮೀಕ್ಷೆ ಮಾಡುತಿದ್ದರು. ಈಗ ಸರ್ಕಾರದ ನಿರ್ದೇಶನದ ಅನ್ವಯ ರೈತರು ತಮ್ಮ ಬೆಳೆಯನ್ನು ತಾವೇ ಸಮೀಕ್ಷೆ ಮಾಡಬೇಕು. ನೀವೇ ಈ ಕೆಲಸ ಮಾಡುವುದರಿಂದ ಯಾವ ಬೆಳೆಯ ವಿವರವೂ ಸಮೀಕ್ಷೆಯಿಂದ ಬಿಟ್ಟು ಹೋಗಲು ಸಾಧ್ಯವಿಲ್ಲ. ಬೆಳೆ ಸಮೀಕ್ಷೆ ಬಗ್ಗೆ ರೈತರು ದೂರು ನೀಡುವುದು ತಪ್ಪಿದಂತಾಗುತ್ತದೆ’ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಅಲ್ಲೇ ಇದ್ದ ರೈತರೊಬ್ಬರು, ತಾವು ಬೆಳೆದಿದ್ದ ಈರುಳ್ಳಿ ಬೆಳೆ ಮಳೆ ಹೆಚ್ಚಾದ ಕಾರಣದಿಂದ ಕೊಳೆತಿದೆ. ಪರಿಹಾರ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಾ. ಎಂ.ಆರ್. ರವಿ ಅವರು, ಇದು ಬೆಳೆ ಸಮೀಕ್ಷೆ ಯೋಜನೆಯಡಿ ಬರುವುದರಿಂದ ಇದನ್ನು ಪರಿಹಾರಕ್ಕೆ ಪರಿಗಣಿಸುವಂತೆ ಸ್ಥಳದಲ್ಲಿಯೇ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.