ಯಳಂದೂರು ಪಟ್ಟಣದ ರಸ್ತೆಯೊಂದರ ಬದಿಯಲ್ಲಿ ಕಂಡು ಬಂದ ಕಸದ ರಾಶಿ
ನೈರ್ಮಲ್ಯಕ್ಕೆ ಒತ್ತು: ರವಿಕೀರ್ತಿ
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿಕೀರ್ತಿ ‘ಪಟ್ಟಣದಲ್ಲಿ ಸಂಗ್ರಹಿಸುವ ಕಸವನ್ನು ಕೊಳ್ಳೇಗಾಲ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಪೂರೈಸಲಾಗುತ್ತದೆ. ಇಲ್ಲಿ ಕಸದ ವೈಜ್ಞಾನಿಕ ನಿರ್ವಹಣೆ ಮಾಡಲಾಗುತ್ತದೆ. ತ್ಯಾಜ್ಯ ಸಾಗಣೆ ವಾಹನ ಹಾಳಾಗಿದ್ದು ಟ್ರಾಕ್ಟರ್ ಬಳಸಲಾಗುತ್ತದೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸಿ ಔಷಧಿ ಸಿಂಪಡಿಸಲಾಗುತ್ತಿದೆ. ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ನಿವಾಸಿಗಳು ಹಸಿಕಸ ಮತ್ತು ಒಣಕಸನ್ನು ಮೂಲದಲ್ಲಿ ಪ್ರತ್ಯೇಕಿಸಿ ಕಸ ಸಾಗಿಸುವವರು ಬಂದಾಗ ಸಹಕಾರ ನೀಡಬೇಕು. ಪ್ರತಿ ಶನಿವಾರ ಸ್ವಚ್ಛಾತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ’ ಎಂದರು.