ಬಹುತೇಕ ನಿವಾಸಿಗಳು ಶೌಚಾಲಯಗಳ ಸಂಪರ್ಕವನ್ನು ಒಳಚರಂಡಿಗೆ ಕಲ್ಪಿಸಿದ್ದಾರೆ. ಇನ್ನೂ ಕೆಲವರು ಕಲ್ಪಿಸಬೇಕಿದೆ. ಸ್ವಚ್ಛತೆ ಕಾಪಾಡಲು ಜನರ ಸಹಕಾರವೂ ಮುಖ್ಯ
ಸುದರ್ಶನ ಗೌಡ ವಾರ್ಡ್ ಸದಸ್ಯ
‘ಸೌಲಭ್ಯ ಕಲ್ಪಿಸಲು ಕ್ರಮ’
21ನೇ ವಾರ್ಡ್ನಲ್ಲಿರುವ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾರ್ಡ್ ಸದಸ್ಯ ಸುದರ್ಶನ ಗೌಡ ‘ಇತ್ತೀಚಿನ ಕೆಲವು ದಿನಗಳಲ್ಲಿ ಕಸ ಸಂಗ್ರಹದಲ್ಲಿ ಸಮಸ್ಯೆಯಾಗಿರುವುದು ನಿಜ. ನಗರಸಭೆಯ ಕಸದ ವಾಹನಗಳು ಹಾಳಾಗಿದ್ದರಿಂದ ಮನೆ ಮನೆಗೆ ಹೋಗಿ ಸಂಗ್ರಹಿಸುವುದಕ್ಕೆ ಆಗಿಲ್ಲ. ಈಗ ವಾಹನಗಳು ಸರಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು ಸಮರ್ಪಕವಾಗಿ ಕಸ ವಿಲೇವಾರಿಗೆ ಸೂಚಿಸಲಾಗುವುದು’ ಎಂದರು. ‘ಹಸಿ ಕಸ ಒಣ ಕಸವನ್ನು ಮೂಲದಲ್ಲೇ ಪ್ರತ್ಯೇಕಿಸಿ ನೀಡುವಂತೆ ವಾರ್ಡ್ನ ನಿವಾಸಿಗಳಿಗೆ ಸೂಚಿಸಲಾಗಿದೆ. ಹಾಗಿದ್ದರೂ ಹಲವರು ಇದನ್ನು ಪಾಲನೆ ಮಾಡುತ್ತಿಲ್ಲ. ಕೆಲವರು ಇನ್ನೂ ಒಳ ಚರಂಡಿಗೆ ಮನೆಯ ಸಂಪರ್ಕ ಕಲ್ಪಿಸಿಲ್ಲ. ವಾರ್ಡ್ನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು. ‘ನಗರೋತ್ಥಾನ ಯೋಜನೆ ಅಡಿಯಲ್ಲಿ ವಾರ್ಡ್ಗೆ ಹಂಚಿಕೆಯಾಗಲಿರುವ ಹಣದಲ್ಲಿ ತೆರೆದ ಚರಂಡಿಗಳಿಗೆ ಮುಚ್ಚಿಗೆ ಹಾಕಲು ಯೋಜನೆ ರೂಪಿಸಲಾಗಿದೆ’ ಎಂದು ಸುದರ್ಶನ ಗೌಡ ಹೇಳಿದರು.