‘ದೇಶದಾದ್ಯಂತ 15.7 ಲಕ್ಷ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಪರೀಕ್ಷೆ ಬಗ್ಗೆ ಮಕ್ಕಳಲ್ಲಿರುವ ಭಯ, ಒತ್ತಡ ಹೋಗಲಾಡಿಸುವ ಉದ್ದೇಶದಿಂದ ಹಾಗೂ ಅವರಲ್ಲಿ ಧೈರ್ಯ ತುಂಬುವುದಕ್ಕಾಗಿ ಪ್ರಧಾನಿ ಐದು ವರ್ಷದಿಂದ ಈ ಸಂವಾದ ನಡೆಸುತ್ತಿದ್ದಾರೆ. ದೂರದರ್ಶನ ಸೇರಿದಂತೆಆಕಾಶವಾಣಿ, ಯೂಟ್ಯೂಬ್, ಪಿಎಂಒ ಇಂಡಿಯಾ, ರಾಜ್ಯಸಭಾ ಟಿವಿ ಸೇರಿದಂತೆ ಹಲವು ಮಾಧ್ಯಮಗಳ ಮೂಲಕ ಇದು ನೇರ ಪ್ರಸಾರವಾಗಲಿದೆ. ಜಿಲ್ಲೆಯ ಜನರು, ಮಕ್ಕಳು ಕೂಡ ಈ ಕಾರ್ಯಕ್ರಮವನ್ನು ವೀಕ್ಷಿಸಬೇಕು’ ಎಂದು ಹೇಳಿದರು.