<p>ಕೊಳ್ಳೇಗಾಲ:ತಾಲ್ಲೂಕಿನ ಚಿಕ್ಕಲ್ಲೂರಿನ ಶ್ರೀ ಘನ ನೀಲಿ ಸಿದ್ದಪ್ಪಾಜಿ ಜಾತ್ರೆ ಈ ವರ್ಷವೂ ಕೋವಿಡ್ನಿಂದ ರದ್ದಾಗಿದೆ.</p>.<p>ಕಳೆದ ವರ್ಷದಂತೆ ಈ ಬಾರಿಯೂ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ಮಾತ್ರ ಜಾತ್ರೆ ನಡೆಯಲಿದೆ. ಇದೇ 17ರಿಂದ 21ರವರೆಗೆ ಐದು ದಿನ ಜಾತ್ರೆ ನಿಗದಿಯಾಗಿತ್ತು.</p>.<p>ಜಾತ್ರೆಗೆ ಅನುಮತಿ ಕೋರಿ ಮಳವಳ್ಳಿಯ ಬಿ.ಜಿ.ಪುರದಮಂಟೇಸ್ವಾಮಿ ಮಠ ಹಾಗೂ ಚಿಕ್ಕಲ್ಲೂರು ಮಠದ ಆಡಳಿತಾಧಿಕಾರಿ ಬಿ.ಪಿ.ಭರತ್ ಅರಸ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.</p>.<p>ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಡ ಳಿತ, ಕೋವಿಡ್ ಕಾರಣಕ್ಕೆ ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಎಲ್ಲ ಧಾರ್ಮಿಕ ಸ್ಥಳಗಳಲ್ಲಿ ಕೋವಿಡ್ 19 ನಿಯಮ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಪ್ರತಿ ನಿತ್ಯದ ಸೇವಾ/ಪೂಜಾ ಕೈಂಕರ್ಯಗಳನ್ನು ನಡೆಸಲು ಅನುಮತಿ ಇದೆ. ಜಾತ್ರೆ, ದೇವಾಲಯಗಳಲ್ಲಿ ನಡೆಯುವ ಹಬ್ಬ, ಮೆರವಣಿಗೆ ಮತ್ತು ಧಾರ್ಮಿಕ ಸಭೆಗಳನ್ನು ಸರ್ಕಾರ ನಿಷೇಧಿಸಿದೆ. ಹಾಗಾಗಿ ಚಿಕ್ಕಲ್ಲೂರಿನ ಜಾತ್ರಾ ಸಮಯ ದಲ್ಲಿ ಪ್ರತಿ ನಿತ್ಯದ ಸೇವೆ/ಪೂಜಾ ಕೈಂಕರ್ಯಗಳಿಗೆ ಮಾತ್ರ ಅವಕಾಶ ಇದೆ ಎಂದು ಹೇಳಿದೆ. </p>.<p>ಐದು ದಿನ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಸ್ಥಳೀಯರು, ಜಿಲ್ಲೆಯವರಲ್ಲದೇ ಮಂಡ್ಯ, ರಾಮನಗರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಐದು ದಿನವೂ ಇಲ್ಲೇ ವಾಸ್ತವ್ಯ ಮಾಡಿ ಹರಕೆ ತೀರಿಸುತ್ತಾರೆ.</p>.<p>ಕಳೆದ ವರ್ಷವೂ ಕೋವಿಡ್ ಕಾರಣಕ್ಕೆ ಅದ್ಧೂರಿ ಜಾತ್ರೆ ನಡೆದಿರಲಿಲ್ಲ. ಗರಿಷ್ಠ 100 ಜನರ ಮಿತಿಯಲ್ಲಿ ಎಲ್ಲ ಸಾಂಪ್ರದಾಯಿಕವಾಗಿ ಎಲ್ಲ ವಿಧಿ–ವಿಧಾನಗಳನ್ನು ನಡೆಸಲು ಮಾತ್ರ ಜಿಲ್ಲಾಡಳಿತ ಅವಕಾಶ ನೀಡಿತ್ತು.</p>.<p class="Briefhead">ಕಸ್ತೂರು ಬಂಡಿಜಾತ್ರೆಯೂ ಸರಳ?</p>.<p>ಸಂತೇಮರಹಳ್ಳಿ: ಕೋವಿಡ್ ನಿರ್ಬಂಧಗಳಿರುವುದರಿಂದ ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಹೋಬಳಿಯ ಕಸ್ತೂರು ಬಂಡಿ ಜಾತ್ರೆ ಕೂಡ ರದ್ದಾಗುವ ಸಾಧ್ಯತೆ ನಿಚ್ಚಳವಾಗಿದೆ.</p>.<p>ಪುಷ್ಯ ಮಾಸದ ಎರಡನೇ ಭಾನುವಾರ ದೊಡ್ಡಮ್ಮತಾಯಿ ಬಂಡಿ ಜಾತ್ರೆ ನಡೆಯುತ್ತದೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ 16 ಗ್ರಾಮಗಳ ಜಾತ್ರೆ ಇದಾಗಿದ್ದು, 23ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಜನರು ಇದರಲ್ಲಿ ಭಾಗವಹಿಸುತ್ತಾರೆ.</p>.<p>ಇದೇ 16ರಂದು ಜಾತ್ರೆಯ ದಿನ ನಿಗದಿಯಾಗಿದೆ.ಜಾತ್ರೆಗೆ ಬಂಡಿ ಕಟ್ಟುವ ಗ್ರಾಮಸ್ಥರು ಹಾಗೂ ಹಬ್ಬ ಆಚರಿಸುವ ಗ್ರಾಮಸ್ಥರು ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ.</p>.<p>ಆದರೆ, ಕೋವಿಡ್ 3ನೇ ಅಲೆ ಕಾರಣಕ್ಕೆ ಸರ್ಕಾರ ನಿರ್ಬಂಧ ಹೇರಿರುವುದರಿಂದ ಜಿಲ್ಲಾಡಳಿತವು ಜಾತ್ರೆಯ ಬಗ್ಗೆ ಇನ್ನೂ ಅಧಿಕೃತ ಆದೇಶ ಹೊರಡಿಸಿಲ್ಲ.</p>.<p>‘ಪ್ರತಿ ವರ್ಷದಂತೆ ಹಬ್ಬ ಆಚರಿಸಲು ಎಲ್ಲ ಗ್ರಾಮಸ್ಥರು ಸೇರಿ ಸಭೆ ನಡೆಸಲಾಗುತಿತ್ತು. ಈ ಬಾರಿ ಇನ್ನು ಸಭೆ ಸೇರಿಲ್ಲ. ಜಿಲ್ಲಾಡಳಿತದ ಆದೇಶ ಕಾಯುತ್ತಿದ್ದೇವೆ’ ಎಂದು ಹೆಗ್ಗವಾಡಿ ಗ್ರಾಮದ ಮುಖಂಡ ಪರಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ‘ಕೋವಿಡ್ ಕಾರಣದಿಂದ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಬಂಡಿ ಜಾತ್ರೆ ಸೇರಿದಂತೆ ಯಾವುದೇ ಜಾತ್ರೆಗಳಿಗೆ ಅವಕಾಶವಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಳ್ಳೇಗಾಲ:ತಾಲ್ಲೂಕಿನ ಚಿಕ್ಕಲ್ಲೂರಿನ ಶ್ರೀ ಘನ ನೀಲಿ ಸಿದ್ದಪ್ಪಾಜಿ ಜಾತ್ರೆ ಈ ವರ್ಷವೂ ಕೋವಿಡ್ನಿಂದ ರದ್ದಾಗಿದೆ.</p>.<p>ಕಳೆದ ವರ್ಷದಂತೆ ಈ ಬಾರಿಯೂ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ಮಾತ್ರ ಜಾತ್ರೆ ನಡೆಯಲಿದೆ. ಇದೇ 17ರಿಂದ 21ರವರೆಗೆ ಐದು ದಿನ ಜಾತ್ರೆ ನಿಗದಿಯಾಗಿತ್ತು.</p>.<p>ಜಾತ್ರೆಗೆ ಅನುಮತಿ ಕೋರಿ ಮಳವಳ್ಳಿಯ ಬಿ.ಜಿ.ಪುರದಮಂಟೇಸ್ವಾಮಿ ಮಠ ಹಾಗೂ ಚಿಕ್ಕಲ್ಲೂರು ಮಠದ ಆಡಳಿತಾಧಿಕಾರಿ ಬಿ.ಪಿ.ಭರತ್ ಅರಸ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.</p>.<p>ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಡ ಳಿತ, ಕೋವಿಡ್ ಕಾರಣಕ್ಕೆ ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಎಲ್ಲ ಧಾರ್ಮಿಕ ಸ್ಥಳಗಳಲ್ಲಿ ಕೋವಿಡ್ 19 ನಿಯಮ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಪ್ರತಿ ನಿತ್ಯದ ಸೇವಾ/ಪೂಜಾ ಕೈಂಕರ್ಯಗಳನ್ನು ನಡೆಸಲು ಅನುಮತಿ ಇದೆ. ಜಾತ್ರೆ, ದೇವಾಲಯಗಳಲ್ಲಿ ನಡೆಯುವ ಹಬ್ಬ, ಮೆರವಣಿಗೆ ಮತ್ತು ಧಾರ್ಮಿಕ ಸಭೆಗಳನ್ನು ಸರ್ಕಾರ ನಿಷೇಧಿಸಿದೆ. ಹಾಗಾಗಿ ಚಿಕ್ಕಲ್ಲೂರಿನ ಜಾತ್ರಾ ಸಮಯ ದಲ್ಲಿ ಪ್ರತಿ ನಿತ್ಯದ ಸೇವೆ/ಪೂಜಾ ಕೈಂಕರ್ಯಗಳಿಗೆ ಮಾತ್ರ ಅವಕಾಶ ಇದೆ ಎಂದು ಹೇಳಿದೆ. </p>.<p>ಐದು ದಿನ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಸ್ಥಳೀಯರು, ಜಿಲ್ಲೆಯವರಲ್ಲದೇ ಮಂಡ್ಯ, ರಾಮನಗರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಐದು ದಿನವೂ ಇಲ್ಲೇ ವಾಸ್ತವ್ಯ ಮಾಡಿ ಹರಕೆ ತೀರಿಸುತ್ತಾರೆ.</p>.<p>ಕಳೆದ ವರ್ಷವೂ ಕೋವಿಡ್ ಕಾರಣಕ್ಕೆ ಅದ್ಧೂರಿ ಜಾತ್ರೆ ನಡೆದಿರಲಿಲ್ಲ. ಗರಿಷ್ಠ 100 ಜನರ ಮಿತಿಯಲ್ಲಿ ಎಲ್ಲ ಸಾಂಪ್ರದಾಯಿಕವಾಗಿ ಎಲ್ಲ ವಿಧಿ–ವಿಧಾನಗಳನ್ನು ನಡೆಸಲು ಮಾತ್ರ ಜಿಲ್ಲಾಡಳಿತ ಅವಕಾಶ ನೀಡಿತ್ತು.</p>.<p class="Briefhead">ಕಸ್ತೂರು ಬಂಡಿಜಾತ್ರೆಯೂ ಸರಳ?</p>.<p>ಸಂತೇಮರಹಳ್ಳಿ: ಕೋವಿಡ್ ನಿರ್ಬಂಧಗಳಿರುವುದರಿಂದ ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಹೋಬಳಿಯ ಕಸ್ತೂರು ಬಂಡಿ ಜಾತ್ರೆ ಕೂಡ ರದ್ದಾಗುವ ಸಾಧ್ಯತೆ ನಿಚ್ಚಳವಾಗಿದೆ.</p>.<p>ಪುಷ್ಯ ಮಾಸದ ಎರಡನೇ ಭಾನುವಾರ ದೊಡ್ಡಮ್ಮತಾಯಿ ಬಂಡಿ ಜಾತ್ರೆ ನಡೆಯುತ್ತದೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ 16 ಗ್ರಾಮಗಳ ಜಾತ್ರೆ ಇದಾಗಿದ್ದು, 23ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಜನರು ಇದರಲ್ಲಿ ಭಾಗವಹಿಸುತ್ತಾರೆ.</p>.<p>ಇದೇ 16ರಂದು ಜಾತ್ರೆಯ ದಿನ ನಿಗದಿಯಾಗಿದೆ.ಜಾತ್ರೆಗೆ ಬಂಡಿ ಕಟ್ಟುವ ಗ್ರಾಮಸ್ಥರು ಹಾಗೂ ಹಬ್ಬ ಆಚರಿಸುವ ಗ್ರಾಮಸ್ಥರು ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ.</p>.<p>ಆದರೆ, ಕೋವಿಡ್ 3ನೇ ಅಲೆ ಕಾರಣಕ್ಕೆ ಸರ್ಕಾರ ನಿರ್ಬಂಧ ಹೇರಿರುವುದರಿಂದ ಜಿಲ್ಲಾಡಳಿತವು ಜಾತ್ರೆಯ ಬಗ್ಗೆ ಇನ್ನೂ ಅಧಿಕೃತ ಆದೇಶ ಹೊರಡಿಸಿಲ್ಲ.</p>.<p>‘ಪ್ರತಿ ವರ್ಷದಂತೆ ಹಬ್ಬ ಆಚರಿಸಲು ಎಲ್ಲ ಗ್ರಾಮಸ್ಥರು ಸೇರಿ ಸಭೆ ನಡೆಸಲಾಗುತಿತ್ತು. ಈ ಬಾರಿ ಇನ್ನು ಸಭೆ ಸೇರಿಲ್ಲ. ಜಿಲ್ಲಾಡಳಿತದ ಆದೇಶ ಕಾಯುತ್ತಿದ್ದೇವೆ’ ಎಂದು ಹೆಗ್ಗವಾಡಿ ಗ್ರಾಮದ ಮುಖಂಡ ಪರಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ‘ಕೋವಿಡ್ ಕಾರಣದಿಂದ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಬಂಡಿ ಜಾತ್ರೆ ಸೇರಿದಂತೆ ಯಾವುದೇ ಜಾತ್ರೆಗಳಿಗೆ ಅವಕಾಶವಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>