ಹನೂರು: ಪಟ್ಟಣದ ಬನ್ನಿಮಂಟಪದ ನಿವಾಸಿ ಪಟ್ಟಣ ಪಂಚಾಯಿತಿ ವಾರ್ಡ್ ನಂ. 2ರ ಸದಸ್ಯ ನಾಗರಾಜು (54) ಅವರು ಸೋಮವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ನಿಂದ ಮೃತಪಟ್ಟಿದ್ದಾರೆ.
ಇವರು ಹಲವು ತಿಂಗಳಿನಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ವಾರದ ಹಿಂದೆ ಜ್ವರ ಕಾಣಿಸಿಕೊಂಡಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆ ವೇಳೆ ಪರೀಕ್ಷಿಸಿದಾಗ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆಗೆ ಅವರು ಸ್ಪಂದಿಸಲಿಲ್ಲ.
ಅಂತ್ಯಕ್ರಿಯೆ ಸರ್ಕಾರದ ನಿಯಮದಂತೆ ಪಟ್ಟಣದ ಹೊರವಲಯದ ಅವರ ಜಮೀನಿನಲ್ಲಿ ನಡೆಯಿತು.