ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ದೀಪಾವಳಿ ಜಾತ್ರಾ ಮಹೋತ್ಸವ ನಡೆಸದಿರಲು ಜಿಲ್ಲಾಡಳಿತ ಈ ಮೊದಲೇ ನಿರ್ಧರಿಸಿತ್ತು. ಹಾಗಾಗಿ, ರಥೋತ್ಸವ, ತೆಪ್ಪೋತ್ಸವ ರದ್ದಾಗಿವೆ. ಉಳಿದಂತೆ ಎಣ್ಣೆ ಮಜ್ಜನ ಸೇವೆ, ಅಮಾವಾಸ್ಯೆ ವಿಶೇಷ ಪೂಜೆ, ಹಾಲರವೆ ಉತ್ಸವಗಳು ಸಾಂಪ್ರಾದಾಯಿಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಾಲಯದ ಒಳಾಂಗಣಕ್ಕೆ ಸೀಮಿತವಾಗಿ ನಡೆಯಲಿವೆ.