ಡಾ.ಅಂಕಪ್ಪ ಮಾತನಾಡಿ, ‘ರೋಗಿಗಳು ಆಸ್ಪತ್ರೆಗೆ ಬಂದಾಗ ವೈದ್ಯರು ರೋಗಿಗಳ ಕನ್ನಡ ಭಾಷೆಯಲ್ಲಿ ಸಾಂತ್ವನ ನುಡಿಗಳನ್ನಾಡಿ ಔಷಧ ಉಪಚಾರಗಳಿಗೆ ಮುಂದಾದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಆಸ್ಪತ್ರೆಗಳಲ್ಲಿ ನಾಮಫಲಕ, ಭಿತ್ತಿಪತ್ರ, ಅರ್ಜಿ, ರೋಗಿಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಕನ್ನಡದಲ್ಲಿಯೇ ಹೊರಡಿಸಲಾಗುತ್ತದೆ. ಕೊರೊನಾ ಸಾಂಕ್ರಾಮಿಕ ರೋಗ ಸೃಷ್ಟಿಸಿರುವ ಮಾನಸಿಕ ದುಗುಡದ ನಡುವೆ ರೋಗಿ ಮತ್ತು ವೈದ್ಯರ ಸಂಬಂಧವನ್ನು ಭಾಷೆಯು ಗಟ್ಟಿಗೊಳಿಸುತ್ತದೆ’ ಎಂದು ಹೇಳಿದರು.