ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ವರ್ಷಋತು, ಶ್ರಾವಣ ಮಾಸ, ಕೃಷ್ಣಪಕ್ಷದ ಆ. 21ರ ಬುಧವಾರ, ದ್ವಿತೀಯ ತಿಥಿ, ಪೂರ್ವಭಾದ್ರ ನಕ್ಷತ್ರ, ಸುಕರ್ಮ ಯೋಗ, ತೈತುಲ ಕರಣ, ಬೆಳಿಗ್ಗೆ 10.05 ರಿಂದ 10.40 ಗಂಟೆಯೊಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಜರುಗಲಿದೆ. ಜುಲೈ 25 ಸಂಜೆ 5.00 ಗಂಟೆಯೊಳಗಾಗಿ ನಿಗಧಿತ ನಮೂನೆ (ಅರ್ಜಿ)ಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕಾಗಿದೆ. ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಬಳಿ ನಿಗಧಿತ ನಮೂನೆ ಪಡೆಯತಕ್ಕದ್ದು, ಸಾಮೂಹಿಕ ವಿವಾಹದಲ್ಲಿ ಲಗ್ನವಾಗಲು ಬಯಸುವ ವಧು-ವರರ ಷರತ್ತುಗಳಿಗೊಳಪಟ್ಟಿದೆ. ವಧುವಿಗೆ ಚಿನ್ನದ ಮಾಂಗಲ್ಯ, ಬೆಳ್ಳಿ ಕಾಲುಂಗುರ, ಸೀರೆ-ರವಿಕೆಯನ್ನು ಹಾಗೂ ವರನಿಗೆ ಪಂಚೆ, ಶರ್ಟು, ಟವಲ್ನ್ನು ಪ್ರಾಧಿಕಾರದ ವತಿಯಿಂದ ಉಚಿತವಾಗಿ ನೀಡಲಾಗುವುದು ಎಂದು ತಿಳಿದುಬಂದಿದೆ.