<p><strong>ಗುಂಡ್ಲುಪೇಟೆ:</strong> ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ವಾರಾಂತ್ಯದಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡಿ, ದೇವರ ದರ್ಶನ ಪಡೆದರು. ಬೆಟ್ಟದ ಸೋಬಗನ್ನು ನೋಡಿ ಖುಷಿ ಪಟ್ಟರು.</p>.<p> ಬೆಟ್ಟಕ್ಕೆ ನೆರೆಯ ಕೇರಳ, ತಮಿಳುನಾಡು, ರಾಜ್ಯದ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಮಂಡ್ಯ ಇತರೆಡೆಗಳಿಂದ ಪ್ರವಾಸಿ ದಂಡೇ ಹರಿದು ಬಂದಿತ್ತು. 4 ಸಾವಿರಕ್ಕೂ ಅಧಿಕ ಮಂದಿ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಬೆಳಿಗ್ಗೆ 11 ಗಂಟೆ ಜನ ಜಂಗುಳಿ ಹೆಚ್ಚಿತ್ತು. ಸರತಿ ಸಾಲಿನಲ್ಲಿ ನಿಂತು ಕೆಎಸ್ಆರ್ಟಿಸಿ ಬಸ್ ಟಿಕೆಟ್ ಖರೀದಿಸಿ ಬೆಟ್ಟಕ್ಕೆ ತೆರಳಿದರು.</p>.<p> ಗೋಪಾಲಸ್ವಾಮಿಗೆ ಜಯಘೋಷ ಕೂಗುತ್ತ ದೇವರ ದರ್ಶನ ಪಡೆದರು. ಭಕ್ತರಿಗೆ ಅನ್ನ ಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.</p>.<p>ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಬೆಟ್ಟದ ಮೇಲೆ ತಣ್ಣನೆಯ ವಾತಾರಣ ಸೃಷ್ಟಿಯಾಗಿದೆ. ಹಚ್ಚ ಹಸಿರಿನ ನಿಸರ್ಗದಲ್ಲಿ ಪ್ರವಾಸಿಗರು ಕೊರೆಯುವ ಚಳಿಯಲ್ಲಿಯೂ ಪೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು ಎಂದು ಮಾರ್ಗದರ್ಶಿ ಎಚ್.ಎಂ.ದೇವರಾಜು ಮಾಹಿತಿ ನೀಡಿದರು.</p>.<p> ಬೆಟ್ಟದ ತಪ್ಪಲಿನಿಂದ ದೇವಸ್ಥಾನಕ್ಕೆ 15ಕ್ಕೂ ಅಧಿಕ ಬಸ್ , ಗುಂಡ್ಲುಪೇಟೆಯಿಂದ 8ಕ್ಕೂ ಅಧಿಕ ಕೆಎಸ್ಆರ್ಟಿಸಿ ಬಸ್ಗಳನ್ನು ವ್ಯವಸ್ಥೆ ಮಾಡಲಾಗಿತ್ತು </p>.<p><strong>ಸಫಾರಿಗೂ ಲಗ್ಗೆ:</strong> ಬಂಡೀಪುರ ಸಫಾರಿಗೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಹುಲಿ, ಚಿರತೆ, ಕಾಡೆಮ್ಮೆ, ನವಿಲು, ಕಾಡಾನೆ ಇತರೆ ಕಾಡು ಪ್ರಾಣಿಗಳು ದರ್ಶನ ನೀಡಿದವು ಎಂದು ಸಫಾರಿ ಚಾಲಕರು ಮಾಹಿತಿ ನೀಡಿದ್ದರು. ಹಲವು ಮಂದಿ ಪ್ರವಾಸಿಗರು ಸಫಾರಿ ಟಿಕೆಟ್ ಸಿಗದೆ ವಾಪಸ್ಸಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ:</strong> ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ವಾರಾಂತ್ಯದಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡಿ, ದೇವರ ದರ್ಶನ ಪಡೆದರು. ಬೆಟ್ಟದ ಸೋಬಗನ್ನು ನೋಡಿ ಖುಷಿ ಪಟ್ಟರು.</p>.<p> ಬೆಟ್ಟಕ್ಕೆ ನೆರೆಯ ಕೇರಳ, ತಮಿಳುನಾಡು, ರಾಜ್ಯದ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಮಂಡ್ಯ ಇತರೆಡೆಗಳಿಂದ ಪ್ರವಾಸಿ ದಂಡೇ ಹರಿದು ಬಂದಿತ್ತು. 4 ಸಾವಿರಕ್ಕೂ ಅಧಿಕ ಮಂದಿ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಬೆಳಿಗ್ಗೆ 11 ಗಂಟೆ ಜನ ಜಂಗುಳಿ ಹೆಚ್ಚಿತ್ತು. ಸರತಿ ಸಾಲಿನಲ್ಲಿ ನಿಂತು ಕೆಎಸ್ಆರ್ಟಿಸಿ ಬಸ್ ಟಿಕೆಟ್ ಖರೀದಿಸಿ ಬೆಟ್ಟಕ್ಕೆ ತೆರಳಿದರು.</p>.<p> ಗೋಪಾಲಸ್ವಾಮಿಗೆ ಜಯಘೋಷ ಕೂಗುತ್ತ ದೇವರ ದರ್ಶನ ಪಡೆದರು. ಭಕ್ತರಿಗೆ ಅನ್ನ ಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.</p>.<p>ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಬೆಟ್ಟದ ಮೇಲೆ ತಣ್ಣನೆಯ ವಾತಾರಣ ಸೃಷ್ಟಿಯಾಗಿದೆ. ಹಚ್ಚ ಹಸಿರಿನ ನಿಸರ್ಗದಲ್ಲಿ ಪ್ರವಾಸಿಗರು ಕೊರೆಯುವ ಚಳಿಯಲ್ಲಿಯೂ ಪೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು ಎಂದು ಮಾರ್ಗದರ್ಶಿ ಎಚ್.ಎಂ.ದೇವರಾಜು ಮಾಹಿತಿ ನೀಡಿದರು.</p>.<p> ಬೆಟ್ಟದ ತಪ್ಪಲಿನಿಂದ ದೇವಸ್ಥಾನಕ್ಕೆ 15ಕ್ಕೂ ಅಧಿಕ ಬಸ್ , ಗುಂಡ್ಲುಪೇಟೆಯಿಂದ 8ಕ್ಕೂ ಅಧಿಕ ಕೆಎಸ್ಆರ್ಟಿಸಿ ಬಸ್ಗಳನ್ನು ವ್ಯವಸ್ಥೆ ಮಾಡಲಾಗಿತ್ತು </p>.<p><strong>ಸಫಾರಿಗೂ ಲಗ್ಗೆ:</strong> ಬಂಡೀಪುರ ಸಫಾರಿಗೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಹುಲಿ, ಚಿರತೆ, ಕಾಡೆಮ್ಮೆ, ನವಿಲು, ಕಾಡಾನೆ ಇತರೆ ಕಾಡು ಪ್ರಾಣಿಗಳು ದರ್ಶನ ನೀಡಿದವು ಎಂದು ಸಫಾರಿ ಚಾಲಕರು ಮಾಹಿತಿ ನೀಡಿದ್ದರು. ಹಲವು ಮಂದಿ ಪ್ರವಾಸಿಗರು ಸಫಾರಿ ಟಿಕೆಟ್ ಸಿಗದೆ ವಾಪಸ್ಸಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>