ನಗರಕ್ಕೆ ಸಮೀಪದ ಹರಳುಕೋಟೆಯ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಮುಂಜಾನೆಯಿಂದಲ್ಏ ವಿವಿಧ ಧಾರ್ಮಿಕ ವಿಧಿ ವಿಧಾನ ಆರಂಭವಾದವು. ಆಂಜನೇಯನಿಗೆ ಹಾಲು, ಮೊಸರು, ಜೇನುತುಪ್ಪ, ಎಳನೀರು, ಅರಿಸಿನದ ಅಭಿಷೇಕ ಮಾಡಲಾಯಿತು. ಮಹಾ ಮಂಗಳಾರತಿ ನೆರವೇರಿತು. ದೇವರಿಗೆ ಬೆಳ್ಳಿ ಕವಚ ಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.