ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಫೆ.14 ಮತ್ತು 15ರಂದು ನಡೆದಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪೂಜಾ ಅವರು‘ಐಒಟಿ (ಇಂಟರ್ನೆಟ್ ಆಫ್ ತಿಂಗ್) ಮೂಲಕ ಆರೋಗ್ಯ ನಿಯಂತ್ರಣ ವ್ಯವಸ್ಥೆ’ಯ ಮಾದರಿಯನ್ನು ಪ್ರದರ್ಶಿಸಿದ್ದರು.ವಿಜ್ಞಾನ ಶಿಕ್ಷಕ ದೊಡ್ಡರಸಯ್ಯ ಅವರ ಮಾರ್ಗದರ್ಶನದಲ್ಲಿ ಈ ಮಾದರಿಯನ್ನು ಸಿದ್ಧಪಡಿಸಿದ್ದ ಪೂಜಾ ಅವರುಜ. 30 ಮತ್ತು 31ರಂದು ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಳು.