‘ಜನವರಿ 31ರಂದು ಸಂಜೆ 4 ಗಂಟೆ ಸುಮಾರಿಗೆ ನಾನು ನಡೆದುಕೊಂಡು ಬರುತ್ತಿರುವಾಗ ಚಿಕ್ಕ ಮಕ್ಕಳು ಬಿಳಿ ವಸ್ತುವನ್ನು ಹಿಡಿದು ಆಟವಾಡುತ್ತಿದ್ದರು. ಅನುಮಾನ ಬಂದು ಪರಿಶೀಲಿಸಿದಾಗ ದಂತ ಎಂಬುದು ಖಚಿತವಾಯಿತು. ಎಲ್ಲಿ ಸಿಕ್ಕಿತು ಎಂದು ಮಕ್ಕಳನ್ನು ವಿಚಾರಿಸಿದಾಗ ಕಸದ ರಾಶಿಯಲ್ಲಿ ಇತ್ತು ಎಂದು ಹೇಳಿ, ವಾಪಸ್ ಅಲ್ಲಿಯೇ ಹಾಕಿ ಹೋದರು. ನಂತರ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದೆ. ಅವರು ಸ್ಥಳಕ್ಕೆ ಬಂದು ಮಹಜರು ಮಾಡಿ, ತೆಗೆದುಕೊಂಡು ಹೋದರು’ ಎಂದು ಮುಖಂಡ ಈಶ್ವರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.