ಶೀತಗಾಳಿ, ತುಂತುರು ಮಳೆ ದಿನವಿಡಿ ಕಾಡಿತು. ಬೆಟ್ಟದಲ್ಲಿ ಹಿತಕರ ವಾತಾವರಣ ಕಂಡುಬಂದಿದ್ದು, ಚಳಿ ತುಂಬಿತ್ತು. ಸಣ್ಣ ಮಳೆ ಮನೆಯಿಂದ ಹೊರ ಬರದಂತೆ ಮನೆ ಮಂದಿಯನ್ನು ಕಾಡಿತು. ದೇವಳಕ್ಕೆ ಬಂದಿದ್ದ ಭಕ್ತರು ಮತ್ತು ಸಂತೆಗೆ ಬಂದಿದ್ದ ಗ್ರಾಹಕರು ಕಾಯಿಪಲ್ಯ ಕೊಳ್ಳಲು ಪರದಾಡಿದರು. ಪಟ್ಟಣದಲ್ಲಿ ಸಂಜೆ ಮಳೆ ವಾಹನ ಸವಾರರಲ್ಲಿ ಮೈನಡುಕ ತಂದರೆ, ಅಲ್ಲಲ್ಲಿ ವಾಹನ ನಿಲ್ಲಿಸಿ ಸುರಕ್ಷಿತ ತಾಣಗಳಲ್ಲಿ ನಿಂತಿದ್ದ ದೃಶ್ಯ ಕಂಡುಬಂತು.