ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಂದಿದ್ದನ್ನು ಕಂಡು ಪ್ರಧಾನ ಅರ್ಚಕ ಹಾಗೂ ಜ್ಯೋತಿಷಿ ರಾಘವನ್ ಅವರು, ದೇವಾಲಯಕ್ಕೆ ಬರುವಂತೆ ದಿವ್ಯಾ ಸಾರಾ ಥಾಮಸ್ ಅವರನ್ನು ಆಹ್ವಾನಿಸಿದರು. ಎಸ್ಪಿ ಅವರು ಕ್ರಿಶ್ಚಿಯನ್ ಆಗಿರುವುದರಿಂದ, ಯೇಸು ಹಾಗೂ ಮರಿಯ ಅವರ ಚಿತ್ರಗಳನ್ನು ಹೊಂದಿರುವ ಫೋಟೊವನ್ನು ವೀರಾಂಜನೇಯ ಸ್ವಾಮಿಯ ಮುಂದೆ ಇಟ್ಟು, ಪೂಜೆ ಮಾಡಿ ನಂತರ ಎಸ್ಪಿಯವರಿಗೆ ದೇವಸ್ಥಾನದ ವತಿಯಿಂದ ಸನ್ಮಾನ ಮಾಡಿದ್ದರು. ಈ ಸಂದರ್ಭದಲ್ಲಿ ರಾಘವನ್ ಅವರು ಆ ಫೋಟೊವನ್ನು ದಿವ್ಯಾ ಅವರಿಗೆ ಉಡುಗೊರೆಯಾಗಿ ನೀಡಿದ್ದರು.