ನಾಲ್ಕು ಎಕರೆ ಜಮೀನಿನಲ್ಲಿ ಬಾಳೆ ಗಿಡಗಳನ್ನು ಹಾಕಿದ್ದಾರೆ. ಒಂದು ಎಕರೆ ಅಷ್ಟು ಬಾಳೆ ಗಿಡಗಳನ್ನು ಕಾಡು ಪ್ರಾಣಿಗಳು ತುಳಿದು ತಿಂದು ನಾಶ ಮಾಡಿದೆ. ಹಂದಿ ಮತ್ತಿತರ ಕಾಡು ಪ್ರಾಣಿಗಳ ಧಾಳಿ ಇರಬಹುದು. ಶುಕ್ರವಾರ ಜಮೀನಿಗೆ ಹೋಗಿ ಬಾಳೆ ಗಿಡಗಳಿಗೆ ನೀರು ಹಾಕಿ ಮನೆಗೆ ಬಂದಿದ್ದೆ, ಬೆಳಿಗ್ಗೆ ಹೋಗಿ ನೋಡಿದಾಗ 500ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ನಾಲ್ಕೈದು ಕಾಡು ಪ್ರಾಣಿಗಳು ತುಳಿದು ತಿಂದು ಹಾಳು ಮಾಡಿವೆ ಎಂದು ಮಾಲೀಕ ಶೈಲೇಂದ್ರ ತಿಳಿಸಿದರು.