<p class="Briefhead"><strong>ಜೋಡಿ ರಸ್ತೆಯ ಚರಂಡಿ ಸರಿಪಡಿಸಿ</strong></p>.<p>ಚಾಮರಾಜನಗರದಲ್ಲಿ ಸ್ವಲ್ಪ ಹೊತ್ತು ಧಾರಾಕಾರ ಮಳೆ ಬಂದರೆ ಸಾಕು; ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಜಿಲ್ಲಾಡಳಿತ ಭವನದ ಗೇಟಿನ ಎದುರು ಚರಂಡಿ ನೀರು ರಸ್ತೆಗೆ ಉಕ್ಕಿ ಹರಿದು ಆವಾಂತರ ಸೃಷ್ಟಿಸುತ್ತದೆ.</p>.<p>ಕಳೆದ ವಾರ ನಿರಂತರವಾಗಿ ಸುರಿದ ಮಳೆಗೆ ಪ್ರತಿ ದಿನ ಜನರು ರಸ್ತೆಯಲ್ಲಿ ಓಡಾಡಲು ಕಿರಿಕಿರಿ ಅನುಭವಿಸಿದ್ದಾರೆ. ರಸ್ತೆಯ ಉಳಿದ ಕಡೆಗಳೆಲ್ಲಾ ಕಾಂಕ್ರೀಟ್ ಚರಂಡಿಯಾಗಿದೆ. ಇಲ್ಲಿ ಕೆಲವು ಅಡಿಗಳಷ್ಟು ದೂರಕ್ಕೆ ಆಗಿಲ್ಲ. ಇದರಿಂದಾಗಿ ಈ ಸಮಸ್ಯೆಯಾಗುತ್ತಿದೆ. ಇರುವ ಚರಂಡಿಯನ್ನಾದರೂ ಸ್ವಲ್ಪ ಅಗಲ ಮಾಡಿ ನೀರು ಸರಾಗವಾಗಿ ಹರಿಯುವುದಕ್ಕೆ ನಗರಸಭೆ ಕ್ರಮ ಕೈಗೊಂಡಿಲ್ಲ. ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಇದರ ಬಗ್ಗೆ ಗಮನಹರಿಸಿ ವ್ಯವಸ್ಥಿತ ಚರಂಡಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕು.</p>.<p>–ನಂದೀಶ ಕೆ.ಜಿ., ಕೊತ್ತಲವಾಡಿ, ಚಾಮರಾಜನಗರ ತಾಲ್ಲೂಕು</p>.<p class="Briefhead"><strong>ಕಳಪೆ ಕಾಮಗಾರಿ</strong></p>.<p>ಗುಂಡ್ಲುಪೇಟೆ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ನಿರ್ಮಿಸಿರುವ ಚರಂಡಿಗಳ ಕಾಮಗಾರಿ ಕಳಪೆಯಾಗಿದ್ದು, ಮೇಲೆ ಹಾಕಲಾಗಿರುವ ಚಪ್ಪಡಿ ಬೀಳುತ್ತಿದೆ. ಈ ಬಗ್ಗೆ ಪುರಸಭೆ, ಜನಪ್ರತಿನಿಧಿಗಳಿಗೆ ತಿಳಿಸಿದರೂ ಪ್ರಯೋಜನ ಆಗುತ್ತಿಲ್ಲ. ಜನರು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಚಪ್ಪಡಿ ಕಲ್ಲು ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ತಕ್ಷಣ ಇದರ ದುರಸ್ತಿಗೆ ಪುರಸಭೆ ಕ್ರಮ ಕೈಗೊಳ್ಳಬೇಕು.</p>.<p>– ಬಿ.ಎಂ.ಮಂಜಪ್ಪ,ಶಿವಪುರ ಗ್ರಾಮ</p>.<p class="Briefhead"><strong>ತೊಂಬೆಗೆ ನೀರು ತುಂಬಿಸಿ</strong></p>.<p>ಸಂತೇಮರಹಳ್ಳಿಯ ಶಂಭು ಬಡಾವಣೆಯಲ್ಲಿರುವ ಕಿರು ನೀರು ಸರಬರಾಜು ಘಟಕದ ತೊಂಬೆಗೆ ಗ್ರಾಮ ಪಂಚಾಯಿತಿಯು ನೀರು ತುಂಬಿಸುತ್ತಿಲ್ಲ.ಎರಡು ವರ್ಷಗಳಿಂದ ತೊಂಬೆ ಅನಾಥವಾಗಿ ನಿಂತಿದೆ. ಕುಡಿಯುವ ನೀರು ಕೆಲವು ಮನೆಗಳಿಗೆ ಸಮರ್ಪಕವಾಗಿ ಬರುತ್ತಿಲ್ಲ. ತೊಂಬೆಗೆ ನೀರು ತುಂಬಿಸಿದರೇ ಬಡಾವಣೆಯ ನಿವಾಸಿಗಳಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಗ್ರಾಮ ಪಂಚಾಯಿತಿಯವರಿಗೆ ಮನವಿ ಮಾಡಿಕೊಂಡಿದ್ದರೂ ಗಮನ ಹರಿಸಿಲ್ಲ. ಇನ್ನಾದರೂ ಗ್ರಾಮ ಪಂಚಾಯಿತಿಯು ತೊಂಬೆಗೆ ನೀರು ತುಂಬಿಸಲು ಮುಂದಾಗಬೇಕು.</p>.<p>–ಮಹೇಶ್, ಸಂತೇಮರಹಳ್ಳಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead"><strong>ಜೋಡಿ ರಸ್ತೆಯ ಚರಂಡಿ ಸರಿಪಡಿಸಿ</strong></p>.<p>ಚಾಮರಾಜನಗರದಲ್ಲಿ ಸ್ವಲ್ಪ ಹೊತ್ತು ಧಾರಾಕಾರ ಮಳೆ ಬಂದರೆ ಸಾಕು; ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಜಿಲ್ಲಾಡಳಿತ ಭವನದ ಗೇಟಿನ ಎದುರು ಚರಂಡಿ ನೀರು ರಸ್ತೆಗೆ ಉಕ್ಕಿ ಹರಿದು ಆವಾಂತರ ಸೃಷ್ಟಿಸುತ್ತದೆ.</p>.<p>ಕಳೆದ ವಾರ ನಿರಂತರವಾಗಿ ಸುರಿದ ಮಳೆಗೆ ಪ್ರತಿ ದಿನ ಜನರು ರಸ್ತೆಯಲ್ಲಿ ಓಡಾಡಲು ಕಿರಿಕಿರಿ ಅನುಭವಿಸಿದ್ದಾರೆ. ರಸ್ತೆಯ ಉಳಿದ ಕಡೆಗಳೆಲ್ಲಾ ಕಾಂಕ್ರೀಟ್ ಚರಂಡಿಯಾಗಿದೆ. ಇಲ್ಲಿ ಕೆಲವು ಅಡಿಗಳಷ್ಟು ದೂರಕ್ಕೆ ಆಗಿಲ್ಲ. ಇದರಿಂದಾಗಿ ಈ ಸಮಸ್ಯೆಯಾಗುತ್ತಿದೆ. ಇರುವ ಚರಂಡಿಯನ್ನಾದರೂ ಸ್ವಲ್ಪ ಅಗಲ ಮಾಡಿ ನೀರು ಸರಾಗವಾಗಿ ಹರಿಯುವುದಕ್ಕೆ ನಗರಸಭೆ ಕ್ರಮ ಕೈಗೊಂಡಿಲ್ಲ. ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಇದರ ಬಗ್ಗೆ ಗಮನಹರಿಸಿ ವ್ಯವಸ್ಥಿತ ಚರಂಡಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕು.</p>.<p>–ನಂದೀಶ ಕೆ.ಜಿ., ಕೊತ್ತಲವಾಡಿ, ಚಾಮರಾಜನಗರ ತಾಲ್ಲೂಕು</p>.<p class="Briefhead"><strong>ಕಳಪೆ ಕಾಮಗಾರಿ</strong></p>.<p>ಗುಂಡ್ಲುಪೇಟೆ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ನಿರ್ಮಿಸಿರುವ ಚರಂಡಿಗಳ ಕಾಮಗಾರಿ ಕಳಪೆಯಾಗಿದ್ದು, ಮೇಲೆ ಹಾಕಲಾಗಿರುವ ಚಪ್ಪಡಿ ಬೀಳುತ್ತಿದೆ. ಈ ಬಗ್ಗೆ ಪುರಸಭೆ, ಜನಪ್ರತಿನಿಧಿಗಳಿಗೆ ತಿಳಿಸಿದರೂ ಪ್ರಯೋಜನ ಆಗುತ್ತಿಲ್ಲ. ಜನರು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಚಪ್ಪಡಿ ಕಲ್ಲು ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ತಕ್ಷಣ ಇದರ ದುರಸ್ತಿಗೆ ಪುರಸಭೆ ಕ್ರಮ ಕೈಗೊಳ್ಳಬೇಕು.</p>.<p>– ಬಿ.ಎಂ.ಮಂಜಪ್ಪ,ಶಿವಪುರ ಗ್ರಾಮ</p>.<p class="Briefhead"><strong>ತೊಂಬೆಗೆ ನೀರು ತುಂಬಿಸಿ</strong></p>.<p>ಸಂತೇಮರಹಳ್ಳಿಯ ಶಂಭು ಬಡಾವಣೆಯಲ್ಲಿರುವ ಕಿರು ನೀರು ಸರಬರಾಜು ಘಟಕದ ತೊಂಬೆಗೆ ಗ್ರಾಮ ಪಂಚಾಯಿತಿಯು ನೀರು ತುಂಬಿಸುತ್ತಿಲ್ಲ.ಎರಡು ವರ್ಷಗಳಿಂದ ತೊಂಬೆ ಅನಾಥವಾಗಿ ನಿಂತಿದೆ. ಕುಡಿಯುವ ನೀರು ಕೆಲವು ಮನೆಗಳಿಗೆ ಸಮರ್ಪಕವಾಗಿ ಬರುತ್ತಿಲ್ಲ. ತೊಂಬೆಗೆ ನೀರು ತುಂಬಿಸಿದರೇ ಬಡಾವಣೆಯ ನಿವಾಸಿಗಳಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಗ್ರಾಮ ಪಂಚಾಯಿತಿಯವರಿಗೆ ಮನವಿ ಮಾಡಿಕೊಂಡಿದ್ದರೂ ಗಮನ ಹರಿಸಿಲ್ಲ. ಇನ್ನಾದರೂ ಗ್ರಾಮ ಪಂಚಾಯಿತಿಯು ತೊಂಬೆಗೆ ನೀರು ತುಂಬಿಸಲು ಮುಂದಾಗಬೇಕು.</p>.<p>–ಮಹೇಶ್, ಸಂತೇಮರಹಳ್ಳಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>