<p><strong>ಚಾಮರಾಜನಗರ:</strong> ಕೋವಿಡ್–19 ಲಾಕ್ಡೌನ್ ನಿಯಮಗಳು ಸಂಪೂರ್ಣವಾಗಿ ಸಡಿಲಿಕೆಗೊಂಡ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.</p>.<p>ಹೂವುಗಳ ಪೈಕಿ ಕೆಜಿ ಕನಕಾಂಬರದ ಬೆಲೆ ₹1000ವರೆಗೂ ತಲುಪಿದರೆ, ಮೊಟ್ಟೆಯ ಬೆಲೆಯಲ್ಲೂ ಗಣನೀಯವಾದ ಏರಿಕೆ ಕಂಡು ಬಂದಿದೆ. ಎರಡು ವಾರಗಳಿಂದ ದುಬಾರಿಯಾಗಿದ್ದ ಕೊತ್ತಂಬರಿ ಸೊಪ್ಪಿನ ಬೆಲೆ ಈ ವಾರವೂ ಇಳಿದಿಲ್ಲ. ನಾಟಿ ಸೊಪ್ಪಿನ ಕಟ್ಟಿಗೆ ₹50 ನೀಡಬೇಕಾಗಿದೆ.</p>.<p>ಲಾಕ್ಡೌನ್ನಿಂದಾಗಿ ತತ್ತರಿಸಿದ್ದ ಪುಷ್ಪೋದ್ಯಮ ಎರಡು ವಾರಗಳಿಂದ ಸ್ವಲ್ಪ ಚೇತರಿಕೆ ಕಂಡಿತ್ತು. ಸೋಮವಾರದಿಂದ ದೇವಸ್ಥಾನಗಳು ಹಾಗೂ ಇತರೆ ಧಾರ್ಮಿಕ ಕೇಂದ್ರಗಳು ತೆರೆದಿರುವುದರಿಂದ ಹೂವಿಗೆ ಬೇಡಿಕೆ ಬಂದಿದೆ. ಅದರಲ್ಲೂ ಕನಕಾಂಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕಳೆದವಾರ ಒಂದು ಕೆಜಿ ಕನಕಾಂಬರಕ್ಕೆ ₹600 ಇತ್ತು. ಈ ವಾರ ₹800ರಿಂದ ₹1,000ವರೆಗೆ ಇದೆ.</p>.<p>‘ಮಳೆಗಾಲ ಆರಂಭವಾಗಿದೆ. ಹೂವುಗಳು ಹೆಚ್ಚಿಗೆ ಬರುತ್ತಿಲ್ಲ. ಇದರ ಜೊತೆಗೆ ದೇವಸ್ಥಾನಗಳು ಭಕ್ತರ ಪ್ರವೇಶಕ್ಕೆ ಮುಕ್ತವಾಗಿವೆ. ಶುಭ ಸಮಾರಂಭಗಳೂ ಆರಂಭವಾಗಿದೆ. ಹೀಗಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆಯಲ್ಲೂ ಏರಿಕೆಯಾಗಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ಚೆನ್ನೀಪುರದ ಮೋಳೆಯ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮಾಂಸ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆಯೂ ಹೆಚ್ಚಾಗಿದೆ. ಸಗಟು ಮಾರುಕಟ್ಟೆಯಲ್ಲಿ ಕಳೆದ ವಾರ 100 ಮೊಟ್ಟೆಗೆ ₹368 ಇತ್ತು. ಈ ವಾರ ₹465 ಆಗಿದೆ. ಲಾಕ್ಡೌನ್ ಆರಂಭವಾದಾಗಿನಿಂದ 200 ಮೊಟ್ಟೆಯ ಬೆಲೆ ₹325ರಿಂದ ₹370ರ ನಡುವೆಯೇ ಇತ್ತು.</p>.<p>‘ಹೋಟೆಲ್ಗಳೆಲ್ಲ ತೆರೆದಿರುವುದರಿಂದ ಮೊಟ್ಟೆಗೆ ಹೆಚ್ಚು ಬೇಡಿಕೆ ಬಂದಿದೆ. ಹೀಗಾಗಿ ಬೆಲೆ ಹೆಚ್ಚಾಗಿದೆ. ಇದರಿಂದ ಕೋಳಿ ಸಾಕಣೆ ಮಾಡುವವರಿಗೆ ಹೆಚ್ಚು ಲಾಭವಾಗಲಿದೆ’ ಎಂದು ವ್ಯಾಪಾರಿ ನವೀನ್ ಹೇಳಿದರು.</p>.<p>ಚಿಕನ್ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಕೆಜಿಗೆ ₹180ರಿಂದ ₹200ರವೆಗೆ ಇದೆ. ಮಟನ್ ಬೆಲೆ (₹600) ಯಥಾಸ್ಥಿತಿ ಮುಂದುವರಿದಿದೆ.</p>.<p class="Briefhead"><strong>ದಪ್ಪ ಮೆಣಸಿನಕಾಯಿ, ಸೇಬು, ದ್ರಾಕ್ಷಿ ಸ್ವಲ್ಪ ತುಟ್ಟಿ</strong></p>.<p>ತರಕಾರಿಗಳ ಪೈಕಿ ಬೀನ್ಸ್ ಬೆಲೆ ಕೆಜಿಗೆ ₹10 ಇಳಿದಿದೆ. ಹಸಿಮೆಣಸು ಕೂಡ ₹5 ಕಡಿಮೆಯಾಗಿದೆ. ಕಳೆದ ವಾರ ಕೆಜಿಗೆ ₹45ರಷ್ಟಿದ್ದ ದಪ್ಪಮೆಣಸಿಕಾಯಿ ಬೆಲೆ ಈ ವಾರ ₹60ರಿಂದ ₹70ಕ್ಕೆ ಏರಿಕೆಯಾಗಿದೆ. ಉಳಿದೆಲ್ಲಾ ತರಕಾರಿಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ.</p>.<p>ಹಣ್ಣುಗಳ ಪೈಕಿ ಸೇಬು ₹10, ದ್ರಾಕ್ಷಿ ₹20ರಷ್ಟು ತುಟ್ಟಿಯಾಗಿದೆ. ಕಿತ್ತಳೆಯ ಧಾರಣೆ ಕೆಜಿಗೆ ₹10ರಿಂದ ₹20ರಷ್ಟು ಕಡಿಮೆಯಾಗಿದೆ. ಸಿಂಧೂರ, ಬಾದಾಮಿ, ರಸಪೂರಿ, ಬಗನಪಲ್ಲಿ ಮಾವುಗಳು ₹40ರಿಂದ ₹70 ನಡುವಿನ ದರದಲ್ಲಿ ಮಾರಾಟವಾಗುತ್ತಿವೆ.</p>.<p>‘ಬೀನ್ಸ್ಗೆ ಬೇಡಿಕೆ ಕಡಿಮೆಯಾಗಿರುವುದರಿಂದ ಬೆಲೆ ಸ್ವಲ್ಪ ಇಳಿದಿದೆ. ದಪ್ಪಮೆಣಸಿನಕಾಯಿ ಆವಕ ಕಡಿಮೆಯಾಗಿದೆ. ಹಾಗಾಗಿ ಬೆಲೆ ಹೆಚ್ಚಿದೆ. ಹಣ್ಣುಗಳಲ್ಲಿ ಸೀಡ್ಲೆಸ್ ದ್ರಾಕ್ಷಿ ಈಗ ಬರುತ್ತಿಲ್ಲ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಅವರು ಹೇಳಿದರು.</p>.<p>‘ಕೊತ್ತಂಬರಿ ಸೊಪ್ಪು ಸ್ಥಳೀಯವಾಗಿ ಲಭ್ಯವಿಲ್ಲ. ಹೊರಗಡೆಯಿಂದ ತರಬೇಕಾಗುತ್ತದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಬೆಲೆ ಹೆಚ್ಚಿರುತ್ತದೆ’ ಎಂದು ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ಕೋವಿಡ್–19 ಲಾಕ್ಡೌನ್ ನಿಯಮಗಳು ಸಂಪೂರ್ಣವಾಗಿ ಸಡಿಲಿಕೆಗೊಂಡ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.</p>.<p>ಹೂವುಗಳ ಪೈಕಿ ಕೆಜಿ ಕನಕಾಂಬರದ ಬೆಲೆ ₹1000ವರೆಗೂ ತಲುಪಿದರೆ, ಮೊಟ್ಟೆಯ ಬೆಲೆಯಲ್ಲೂ ಗಣನೀಯವಾದ ಏರಿಕೆ ಕಂಡು ಬಂದಿದೆ. ಎರಡು ವಾರಗಳಿಂದ ದುಬಾರಿಯಾಗಿದ್ದ ಕೊತ್ತಂಬರಿ ಸೊಪ್ಪಿನ ಬೆಲೆ ಈ ವಾರವೂ ಇಳಿದಿಲ್ಲ. ನಾಟಿ ಸೊಪ್ಪಿನ ಕಟ್ಟಿಗೆ ₹50 ನೀಡಬೇಕಾಗಿದೆ.</p>.<p>ಲಾಕ್ಡೌನ್ನಿಂದಾಗಿ ತತ್ತರಿಸಿದ್ದ ಪುಷ್ಪೋದ್ಯಮ ಎರಡು ವಾರಗಳಿಂದ ಸ್ವಲ್ಪ ಚೇತರಿಕೆ ಕಂಡಿತ್ತು. ಸೋಮವಾರದಿಂದ ದೇವಸ್ಥಾನಗಳು ಹಾಗೂ ಇತರೆ ಧಾರ್ಮಿಕ ಕೇಂದ್ರಗಳು ತೆರೆದಿರುವುದರಿಂದ ಹೂವಿಗೆ ಬೇಡಿಕೆ ಬಂದಿದೆ. ಅದರಲ್ಲೂ ಕನಕಾಂಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕಳೆದವಾರ ಒಂದು ಕೆಜಿ ಕನಕಾಂಬರಕ್ಕೆ ₹600 ಇತ್ತು. ಈ ವಾರ ₹800ರಿಂದ ₹1,000ವರೆಗೆ ಇದೆ.</p>.<p>‘ಮಳೆಗಾಲ ಆರಂಭವಾಗಿದೆ. ಹೂವುಗಳು ಹೆಚ್ಚಿಗೆ ಬರುತ್ತಿಲ್ಲ. ಇದರ ಜೊತೆಗೆ ದೇವಸ್ಥಾನಗಳು ಭಕ್ತರ ಪ್ರವೇಶಕ್ಕೆ ಮುಕ್ತವಾಗಿವೆ. ಶುಭ ಸಮಾರಂಭಗಳೂ ಆರಂಭವಾಗಿದೆ. ಹೀಗಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆಯಲ್ಲೂ ಏರಿಕೆಯಾಗಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ಚೆನ್ನೀಪುರದ ಮೋಳೆಯ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮಾಂಸ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆಯೂ ಹೆಚ್ಚಾಗಿದೆ. ಸಗಟು ಮಾರುಕಟ್ಟೆಯಲ್ಲಿ ಕಳೆದ ವಾರ 100 ಮೊಟ್ಟೆಗೆ ₹368 ಇತ್ತು. ಈ ವಾರ ₹465 ಆಗಿದೆ. ಲಾಕ್ಡೌನ್ ಆರಂಭವಾದಾಗಿನಿಂದ 200 ಮೊಟ್ಟೆಯ ಬೆಲೆ ₹325ರಿಂದ ₹370ರ ನಡುವೆಯೇ ಇತ್ತು.</p>.<p>‘ಹೋಟೆಲ್ಗಳೆಲ್ಲ ತೆರೆದಿರುವುದರಿಂದ ಮೊಟ್ಟೆಗೆ ಹೆಚ್ಚು ಬೇಡಿಕೆ ಬಂದಿದೆ. ಹೀಗಾಗಿ ಬೆಲೆ ಹೆಚ್ಚಾಗಿದೆ. ಇದರಿಂದ ಕೋಳಿ ಸಾಕಣೆ ಮಾಡುವವರಿಗೆ ಹೆಚ್ಚು ಲಾಭವಾಗಲಿದೆ’ ಎಂದು ವ್ಯಾಪಾರಿ ನವೀನ್ ಹೇಳಿದರು.</p>.<p>ಚಿಕನ್ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಕೆಜಿಗೆ ₹180ರಿಂದ ₹200ರವೆಗೆ ಇದೆ. ಮಟನ್ ಬೆಲೆ (₹600) ಯಥಾಸ್ಥಿತಿ ಮುಂದುವರಿದಿದೆ.</p>.<p class="Briefhead"><strong>ದಪ್ಪ ಮೆಣಸಿನಕಾಯಿ, ಸೇಬು, ದ್ರಾಕ್ಷಿ ಸ್ವಲ್ಪ ತುಟ್ಟಿ</strong></p>.<p>ತರಕಾರಿಗಳ ಪೈಕಿ ಬೀನ್ಸ್ ಬೆಲೆ ಕೆಜಿಗೆ ₹10 ಇಳಿದಿದೆ. ಹಸಿಮೆಣಸು ಕೂಡ ₹5 ಕಡಿಮೆಯಾಗಿದೆ. ಕಳೆದ ವಾರ ಕೆಜಿಗೆ ₹45ರಷ್ಟಿದ್ದ ದಪ್ಪಮೆಣಸಿಕಾಯಿ ಬೆಲೆ ಈ ವಾರ ₹60ರಿಂದ ₹70ಕ್ಕೆ ಏರಿಕೆಯಾಗಿದೆ. ಉಳಿದೆಲ್ಲಾ ತರಕಾರಿಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ.</p>.<p>ಹಣ್ಣುಗಳ ಪೈಕಿ ಸೇಬು ₹10, ದ್ರಾಕ್ಷಿ ₹20ರಷ್ಟು ತುಟ್ಟಿಯಾಗಿದೆ. ಕಿತ್ತಳೆಯ ಧಾರಣೆ ಕೆಜಿಗೆ ₹10ರಿಂದ ₹20ರಷ್ಟು ಕಡಿಮೆಯಾಗಿದೆ. ಸಿಂಧೂರ, ಬಾದಾಮಿ, ರಸಪೂರಿ, ಬಗನಪಲ್ಲಿ ಮಾವುಗಳು ₹40ರಿಂದ ₹70 ನಡುವಿನ ದರದಲ್ಲಿ ಮಾರಾಟವಾಗುತ್ತಿವೆ.</p>.<p>‘ಬೀನ್ಸ್ಗೆ ಬೇಡಿಕೆ ಕಡಿಮೆಯಾಗಿರುವುದರಿಂದ ಬೆಲೆ ಸ್ವಲ್ಪ ಇಳಿದಿದೆ. ದಪ್ಪಮೆಣಸಿನಕಾಯಿ ಆವಕ ಕಡಿಮೆಯಾಗಿದೆ. ಹಾಗಾಗಿ ಬೆಲೆ ಹೆಚ್ಚಿದೆ. ಹಣ್ಣುಗಳಲ್ಲಿ ಸೀಡ್ಲೆಸ್ ದ್ರಾಕ್ಷಿ ಈಗ ಬರುತ್ತಿಲ್ಲ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಅವರು ಹೇಳಿದರು.</p>.<p>‘ಕೊತ್ತಂಬರಿ ಸೊಪ್ಪು ಸ್ಥಳೀಯವಾಗಿ ಲಭ್ಯವಿಲ್ಲ. ಹೊರಗಡೆಯಿಂದ ತರಬೇಕಾಗುತ್ತದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಬೆಲೆ ಹೆಚ್ಚಿರುತ್ತದೆ’ ಎಂದು ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>