<p><strong>ಚಾಮರಾಜನಗರ</strong>: ನಗರದ ಮಾರುಕಟ್ಟೆಯಲ್ಲಿ ಈ ವಾರ ತರಕಾರಿ, ಹಣ್ಣುಗಳ ಧಾರಣೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ತರಕಾರಿಗಳ ಪೈಕಿ ಬೀನ್ಸ್ ಧಾರಣೆ ಇಳಿಕೆಯಾಗಿದೆ. ಹೂವುಗಳಿಗೆ ಬೇಡಿಕೆ ಇಲ್ಲದಿರುವುದರಿಂದ ಬೆಲೆಯೂ ಇಳಿದಿದೆ. </p>.<p>ತರಕಾರಿ ಮಾರುಕಟ್ಟೆಯಲ್ಲಿ ಕಳೆದ ವಾರಾಂಭದಲ್ಲಿ ಬೀನ್ಸ್ ಧಾರಣೆ ಏರಿತ್ತು. ಹಾಪ್ಕಾಮ್ಸ್ನಲ್ಲಿ ₹50ರಿಂದ ₹60ರವರೆಗೆ ಇತ್ತು. ಈ ವಾರ ಬೆಲೆಯಲ್ಲಿ ಇಳಿಮುಖವಾಗಿದ್ದು, ಕೆಜಿಗೆ ₹40 ಇದೆ. </p>.<p>ಹಲವು ವಾರಗಳಿಂದ ಟೊಟೊಟೊ ಬೆಲೆ ಸ್ಥಿರವಾಗಿದೆ. ಕೆಜಿಗೆ ₹30ರಂತೆ ಮಾರಾಟವಾಗುತ್ತಿದೆ. ತಳ್ಳುಗಾಡಿಗಳಲ್ಲಿ ಬೆಲೆ ಇನ್ನಷ್ಟು ಕಡಿಮೆ ಇದೆ. </p>.<p>ಉಳಿದ ತರಕಾರಿಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಬೆಳ್ಳುಳ್ಳಿ ಧಾರಣೆ ಇಳಿಮುಖವಾಗಿಲ್ಲ. ಈ ವಾರವೂ ಕೆಜಿಗೆ ₹240 ಇದೆ. ಮೂಲಂಗಿ, ಮೂಲಂಗಿ, ಈರುಳ್ಳಿ ₹30ಕ್ಕೆ ಸಿಗುತ್ತಿದೆ. ಗಾತ್ರದಲ್ಲಿ ದೊಡ್ಡದಾಗಿರುವ, ಗುಣಮಟ್ಟದ ಈರುಳ್ಳಿಗೆ ವ್ಯಾಪಾರಿಗಳು ₹5 ಹೆಚ್ಚು ಹೇಳುತ್ತಿದ್ದಾರೆ. </p>.<p>‘ಕಳೆದ ವಾರದಲ್ಲಿ ಕೆಲವು ದಿನ ಬೀನ್ಸ್ ಮಾರುಕಟ್ಟೆಗೆ ಕಡಿಮೆ ಬಂದಿತ್ತು. ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿದ್ದರಿಂದ ಎಲ್ಲ ಕಡೆಗಳಲ್ಲೂ ಬೆಲೆ ಜಾಸ್ತಿಯಾಗಿತ್ತು. ಈಗ ಆವಕ ಹೆಚ್ಚಾಗುತ್ತಿದ್ದು, ಬೆಲೆ ಇಳಿಕೆಯಾಗಿದೆ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಹೇಳಿದರು. </p>.<p>ಸೊಪ್ಪು ತರಕಾರಿಗಳು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದು, ಕಟ್ಟಿಗೆ ₹10ರಿಂದ ₹20ರವರೆಗೆ ಇದೆ. ಅವರೆಕಾಯಿ, ತೊಗರಿಕಾಯಿಗಳಿಗೆ ಬೇಡಿಕೆ ಮುಂದುವರಿದಿದ್ದು, ಬೆಲೆ ಕ್ರಮವಾಗಿ ₹50 ಮತ್ತು ₹60 ಇದೆ. </p>.<p>ಹಣ್ಣುಗಳ ಬೆಲೆ ಸ್ಥಿರವಾಗಿದೆ. ಹಾಪ್ಕಾಮ್ಸ್ನಲ್ಲಿ ಸೇಬಿಗೆ ₹120ರಿಂದ ₹140 ಇದೆ. ದಾಳಿಂಬೆಗೂ ಇಷ್ಟೇ ಬೆಲೆ ಇದೆ. ಕಿತ್ತಳೆ ಸಾಕಷ್ಟು ಪ್ರಮಾಣದಲ್ಲಿ ಬರುತ್ತಿದ್ದರೂ, ಬೆಲೆ ₹60ರಿಂದ ₹70ರವರೆಗೆ ಇದೆ. ಮೂಸಂಬಿಗೆ ಕೆಜಿಗೆ ₹80 ಹೇಳುತ್ತಿದ್ದಾರೆ. ಏಲಕ್ಕಿ ಬಾಳೆಹಣ್ಣು, ಪಚ್ಚೆ ಬಾಳೆ ಹಣ್ಣು ಕ್ರಮವಾಗಿ ₹60 ಮತ್ತು ₹40ಕ್ಕೆ ಮಾರಾಟವಾಗುತ್ತಿದೆ. </p>.<p>ಮಾಂಸದ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿಕನ್ಗೆ ₹180ರಿಂದ ₹200ರವರೆಗೆ ಬೆಲೆ ಇದೆ. ಮಟನ್ಗೆ ಕೆಜಿಗೆ ₹600 ಕೊಡಬೇಕಿದೆ. </p>.<p><strong>ಇಳಿದ ಹೂವಿನ ಧಾರಣೆ</strong> </p><p>ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೂವಿನ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಕನಕಾಂಬರ ಬಿಟ್ಟರೆ ಉಳಿದ ಪುಷ್ಪಗಳಿಗೆ ಬೇಡಿಕೆ ಇಲ್ಲ ಎಂದು ಹೇಳುತ್ತಿದ್ದಾರೆ ಬಿಡಿ ಹೂವಿನ ವ್ಯಾಪಾರಿಗಳು. ಈ ವಾರಾಂತ್ಯದಲ್ಲಿ ಸಂಕ್ರಾಂತಿ ಹಬ್ಬ ಇರುವುದರಿಂದ ಎರಡು ದಿನಗಳ ಕಾಲ ಬೇಡಿಕೆ ಇರಬಹುದು. ನಂತರ ಮತ್ತೆ ಬೆಲೆ ಇಳಿಯಬಹುದು ಎಂದು ಚೆನ್ನಿಪುರಮೋಳೆಯ ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು. ಸೇವಂತಿಗೆಯ ಬೆಲೆ ಗಣನೀಯವಾಗಿ ಇಳಿದಿದೆ. ಹೋದ ವಾರ ಕೆಜಿಗೆ ₹120ರಿಂದ ₹160ರವರೆಗೆ ಇತ್ತು. ಈ ವಾರ ₹40ರಿಂದ–₹50 ಇದೆ. ಚೆಂಡು ಹೂವು ಸುಗಂಧರಾಜ ಹೂವುಗಳ ಧಾರಣೆಯೂ ತುಂಬಾ ಕಡಿಮೆಯಾಗಿದೆ. ‘ಶುಭ ಸಮಾರಂಭಗಳು ಇಲ್ಲದಿರುವುದರಿಂದ ಹೂವಿಗೆ ಬೇಡಿಕೆ ಇಲ್ಲ. ಸಂಕ್ರಾಂತಿ ಸಮಯದಲ್ಲಿ ಎರಡು ಮೂರು ದಿನಗಳ ಕಾಲ ಬೆಲೆ ಹೆಚ್ಚಲಿದೆ’ ಎಂದು ವ್ಯಾಪಾರಿಗಳು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ನಗರದ ಮಾರುಕಟ್ಟೆಯಲ್ಲಿ ಈ ವಾರ ತರಕಾರಿ, ಹಣ್ಣುಗಳ ಧಾರಣೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ತರಕಾರಿಗಳ ಪೈಕಿ ಬೀನ್ಸ್ ಧಾರಣೆ ಇಳಿಕೆಯಾಗಿದೆ. ಹೂವುಗಳಿಗೆ ಬೇಡಿಕೆ ಇಲ್ಲದಿರುವುದರಿಂದ ಬೆಲೆಯೂ ಇಳಿದಿದೆ. </p>.<p>ತರಕಾರಿ ಮಾರುಕಟ್ಟೆಯಲ್ಲಿ ಕಳೆದ ವಾರಾಂಭದಲ್ಲಿ ಬೀನ್ಸ್ ಧಾರಣೆ ಏರಿತ್ತು. ಹಾಪ್ಕಾಮ್ಸ್ನಲ್ಲಿ ₹50ರಿಂದ ₹60ರವರೆಗೆ ಇತ್ತು. ಈ ವಾರ ಬೆಲೆಯಲ್ಲಿ ಇಳಿಮುಖವಾಗಿದ್ದು, ಕೆಜಿಗೆ ₹40 ಇದೆ. </p>.<p>ಹಲವು ವಾರಗಳಿಂದ ಟೊಟೊಟೊ ಬೆಲೆ ಸ್ಥಿರವಾಗಿದೆ. ಕೆಜಿಗೆ ₹30ರಂತೆ ಮಾರಾಟವಾಗುತ್ತಿದೆ. ತಳ್ಳುಗಾಡಿಗಳಲ್ಲಿ ಬೆಲೆ ಇನ್ನಷ್ಟು ಕಡಿಮೆ ಇದೆ. </p>.<p>ಉಳಿದ ತರಕಾರಿಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಬೆಳ್ಳುಳ್ಳಿ ಧಾರಣೆ ಇಳಿಮುಖವಾಗಿಲ್ಲ. ಈ ವಾರವೂ ಕೆಜಿಗೆ ₹240 ಇದೆ. ಮೂಲಂಗಿ, ಮೂಲಂಗಿ, ಈರುಳ್ಳಿ ₹30ಕ್ಕೆ ಸಿಗುತ್ತಿದೆ. ಗಾತ್ರದಲ್ಲಿ ದೊಡ್ಡದಾಗಿರುವ, ಗುಣಮಟ್ಟದ ಈರುಳ್ಳಿಗೆ ವ್ಯಾಪಾರಿಗಳು ₹5 ಹೆಚ್ಚು ಹೇಳುತ್ತಿದ್ದಾರೆ. </p>.<p>‘ಕಳೆದ ವಾರದಲ್ಲಿ ಕೆಲವು ದಿನ ಬೀನ್ಸ್ ಮಾರುಕಟ್ಟೆಗೆ ಕಡಿಮೆ ಬಂದಿತ್ತು. ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿದ್ದರಿಂದ ಎಲ್ಲ ಕಡೆಗಳಲ್ಲೂ ಬೆಲೆ ಜಾಸ್ತಿಯಾಗಿತ್ತು. ಈಗ ಆವಕ ಹೆಚ್ಚಾಗುತ್ತಿದ್ದು, ಬೆಲೆ ಇಳಿಕೆಯಾಗಿದೆ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಹೇಳಿದರು. </p>.<p>ಸೊಪ್ಪು ತರಕಾರಿಗಳು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದು, ಕಟ್ಟಿಗೆ ₹10ರಿಂದ ₹20ರವರೆಗೆ ಇದೆ. ಅವರೆಕಾಯಿ, ತೊಗರಿಕಾಯಿಗಳಿಗೆ ಬೇಡಿಕೆ ಮುಂದುವರಿದಿದ್ದು, ಬೆಲೆ ಕ್ರಮವಾಗಿ ₹50 ಮತ್ತು ₹60 ಇದೆ. </p>.<p>ಹಣ್ಣುಗಳ ಬೆಲೆ ಸ್ಥಿರವಾಗಿದೆ. ಹಾಪ್ಕಾಮ್ಸ್ನಲ್ಲಿ ಸೇಬಿಗೆ ₹120ರಿಂದ ₹140 ಇದೆ. ದಾಳಿಂಬೆಗೂ ಇಷ್ಟೇ ಬೆಲೆ ಇದೆ. ಕಿತ್ತಳೆ ಸಾಕಷ್ಟು ಪ್ರಮಾಣದಲ್ಲಿ ಬರುತ್ತಿದ್ದರೂ, ಬೆಲೆ ₹60ರಿಂದ ₹70ರವರೆಗೆ ಇದೆ. ಮೂಸಂಬಿಗೆ ಕೆಜಿಗೆ ₹80 ಹೇಳುತ್ತಿದ್ದಾರೆ. ಏಲಕ್ಕಿ ಬಾಳೆಹಣ್ಣು, ಪಚ್ಚೆ ಬಾಳೆ ಹಣ್ಣು ಕ್ರಮವಾಗಿ ₹60 ಮತ್ತು ₹40ಕ್ಕೆ ಮಾರಾಟವಾಗುತ್ತಿದೆ. </p>.<p>ಮಾಂಸದ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿಕನ್ಗೆ ₹180ರಿಂದ ₹200ರವರೆಗೆ ಬೆಲೆ ಇದೆ. ಮಟನ್ಗೆ ಕೆಜಿಗೆ ₹600 ಕೊಡಬೇಕಿದೆ. </p>.<p><strong>ಇಳಿದ ಹೂವಿನ ಧಾರಣೆ</strong> </p><p>ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೂವಿನ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಕನಕಾಂಬರ ಬಿಟ್ಟರೆ ಉಳಿದ ಪುಷ್ಪಗಳಿಗೆ ಬೇಡಿಕೆ ಇಲ್ಲ ಎಂದು ಹೇಳುತ್ತಿದ್ದಾರೆ ಬಿಡಿ ಹೂವಿನ ವ್ಯಾಪಾರಿಗಳು. ಈ ವಾರಾಂತ್ಯದಲ್ಲಿ ಸಂಕ್ರಾಂತಿ ಹಬ್ಬ ಇರುವುದರಿಂದ ಎರಡು ದಿನಗಳ ಕಾಲ ಬೇಡಿಕೆ ಇರಬಹುದು. ನಂತರ ಮತ್ತೆ ಬೆಲೆ ಇಳಿಯಬಹುದು ಎಂದು ಚೆನ್ನಿಪುರಮೋಳೆಯ ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು. ಸೇವಂತಿಗೆಯ ಬೆಲೆ ಗಣನೀಯವಾಗಿ ಇಳಿದಿದೆ. ಹೋದ ವಾರ ಕೆಜಿಗೆ ₹120ರಿಂದ ₹160ರವರೆಗೆ ಇತ್ತು. ಈ ವಾರ ₹40ರಿಂದ–₹50 ಇದೆ. ಚೆಂಡು ಹೂವು ಸುಗಂಧರಾಜ ಹೂವುಗಳ ಧಾರಣೆಯೂ ತುಂಬಾ ಕಡಿಮೆಯಾಗಿದೆ. ‘ಶುಭ ಸಮಾರಂಭಗಳು ಇಲ್ಲದಿರುವುದರಿಂದ ಹೂವಿಗೆ ಬೇಡಿಕೆ ಇಲ್ಲ. ಸಂಕ್ರಾಂತಿ ಸಮಯದಲ್ಲಿ ಎರಡು ಮೂರು ದಿನಗಳ ಕಾಲ ಬೆಲೆ ಹೆಚ್ಚಲಿದೆ’ ಎಂದು ವ್ಯಾಪಾರಿಗಳು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>